ಹವ್ವಳ್ಳಿ ವಾರ್ಡ್ನ ಎಚ್.ಎಸ್, ಗಿರೀಶ್ ಮಾತನಾಡಿ, ‘ಪಂಚಾಯಿತಿಯಲ್ಲಿ ಒಟ್ಟು ಹತ್ತು ವಾರ್ಡ್ಗಳಿದ್ದು, ಕೆಲ ವಾರ್ಡ್ಗಳಿಗೆ ಮಾತ್ರ ಕಸ ಸಂಗ್ರಹಿಸುವ ಟ್ರಾಕ್ಟರ್, ಬರುತ್ತಿದೆ. ಕಸದ ರಾಶಿಯಲ್ಲಿರುವ ಕೊಳೆತ ಹಣ್ಣು, ತರಕಾರಿ ತಿನ್ನಲು ಬರುವ ಜಾನುವಾರುಗಳು ಅದರೊಟ್ಟಿಗೆ ಪ್ಲಾಸ್ಟಿಕ್ ಸಹ ಸೇವಿಸುತ್ತಿದ್ದು, ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಸಮೀಪದ ಗದ್ದೆಯಲ್ಲಿ ಸಹ ಕಸವನ್ನು ಸುರಿಯಲಾಗಿದೆ. ಇಲ್ಲಿ ಸಮೀಪದ ಮನೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಕಸ ಹಾಕುವವರ ಮಾಹಿತಿ ಸಂಗ್ರಹಿಸಿ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದರು.