ಚಿಕ್ಕಬಳ್ಳಾಪುರದಲ್ಲಿ 18 ಸಾವಿರ, ಬಾಗೇಪಲ್ಲಿಯಲ್ಲಿ 13 ಸಾವಿರ ಲೀಡ್ ಲೆಕ್ಕ ದೇವನಹಳ್ಳಿ ಕ್ಷೇತ್ರದಲ್ಲಿ 10ರಿಂದ 15 ಸಾವಿರ ಲೀಡ್ ಎಂದ ಮುಖಂಡರು ಬೂತ್ವಾರು ಮಾಹಿತಿ ಕಲೆ ಹಾಕುತ್ತಿರುವ ಅಭ್ಯರ್ಥಿ
ನಾಲ್ಕು ಕ್ಷೇತ್ರಗಳಲ್ಲಿ ಸಭೆ ಬಾಕಿ
ದೊಡ್ಡಬಳ್ಳಾಪುರ ಯಲಹಂಕ ಗೌರಿಬಿದನೂರು ಮತ್ತು ಹೊಸಕೋಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಇನ್ನೂ ಅವಲೋಕನ ಸಭೆಗಳು ನಡೆದಿಲ್ಲ. ಶೀಘ್ರದಲ್ಲಿಯೇ ಈ ಕ್ಷೇತ್ರಗಳಲ್ಲಿ ಅವಲೋಕನ ಸಭೆ ನಡೆಸಲಾಗುತ್ತದೆ ಎಂದು ಡಾ.ಕೆ.ಸುಧಾಕರ್ ಆಪ್ತ ಮೂಲಗಳು ತಿಳಿಸುತ್ತವೆ.
‘ತಪ್ಪು ಮಾಹಿತಿ ನೀಡದಿರಿ’
ಸಭೆಯಲ್ಲಿ ಕೆಲವು ಮುಖಂಡರು ತಮ್ಮ ಬೂತ್ನ ಮತಗಳಿಕೆಯನ್ನು ಬಿಟ್ಟು ಬೇರೆ ವಿಚಾರಗಳನ್ನು ಮಾತನಾಡಲು ಮುಂದಾದಾಗ ‘ನಿಮ್ಮ ಬೂತ್ನಲ್ಲಿ ನಮಗೆ ಎಷ್ಟು ಮತಗಳು ಬರುತ್ತವೆ ಎನ್ನುವ ವಿಚಾರ ಕೇಂದ್ರೀಕರಿಸಿ ಮಾತನಾಡಿ. ಯಾವುದೇ ಕಾರಣಕ್ಕೂ ತಪ್ಪು ಮಾಹಿತಿ ನೀಡಬಾರದು. ಮಾಹಿತಿ ವಿಶ್ವಾಸಾರ್ಹವಾಗಿರಲಿ’ ಎಂದು ಡಾ.ಕೆ.ಸುಧಾಕರ್ ತಿಳಿಸಿದ್ದಾರಂತೆ.