<p>ಕಡೂರು: ನ್ಯಾಕ್ ಸಮಿತಿಯಿಂದ ‘ಎ’ ಶ್ರೇಣಿ ಮಾನ್ಯತೆ ಪಡೆದಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಎ+ ಶ್ರೇಣಿ ದೊರಕಿಸಿಕೊಡುವುದಕ್ಕೆ ಪ್ರಥಮ ಆದ್ಯತೆ ನೀಡುವೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.</p>.<p>ಕಡೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.</p>.<p>32 ವರ್ಷಗಳ ನಂತರ ಕಾಲೇಜು ನ್ಯಾಕ್ ಸಮಿತಿಯಿಂದ ‘ಎ’ ದರ್ಜೆಯ ಮಾನ್ಯತೆ ಗಳಿಸಿದೆ. ಎ+ ಮಾನ್ಯತೆ ಗಳಿಸಲು ಬಹುಮುಖ್ಯವಾಗಿ ಕಾಲೇಜಿಗೆ ವಿಶಾಲ ಜಾಗ ಅಗತ್ಯ. ಶೀಘ್ರದಲ್ಲಿ ಈ ಕೊರತೆ ನೀಗಿಸಿ ಕಾಲೇಜಿಗೆ ಎ+ ಮಾನ್ಯತೆ ದೊರಕಿಸುವುದು ನನ್ನ ಗುರಿಯಾಗಿದೆ. ನಿರುದ್ಯೋಗ ಸಮಸ್ಯೆಗೆ ಗಣನೀಯ ಪರಿಹಾರ ದೊರಕಿಸಿಕೊಳ್ಳಲು ಉದ್ಯೋಗ ಮೇಳವನ್ನು ಪ್ರತಿಷ್ಠಿತ ಕಂಪನಿಗಳ ಸಹಯೋಗದಲ್ಲಿ ಆಯೋಜಿಸುವ ಆಶಯ ನನ್ನದಾಗಿದೆ ಎಂದರು.</p>.<p>ಪ್ರಾಚಾರ್ಯ ರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಉದ್ಯೋಗ ಕೋಶದ ಸಂಯೋಜಕ ಜಯಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಎಸ್.ಬಿ.ಮಂಜುನಾಥ್, ಹಮೀದಾಬಾನು ಬೇಗಂ, ರಾಘವೇಂದ್ರ ಕುಮಾರ್, ಎಸ್.ಕುಮಾರ್, ತಿಮ್ಮೇಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಡೂರು: ನ್ಯಾಕ್ ಸಮಿತಿಯಿಂದ ‘ಎ’ ಶ್ರೇಣಿ ಮಾನ್ಯತೆ ಪಡೆದಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಎ+ ಶ್ರೇಣಿ ದೊರಕಿಸಿಕೊಡುವುದಕ್ಕೆ ಪ್ರಥಮ ಆದ್ಯತೆ ನೀಡುವೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.</p>.<p>ಕಡೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.</p>.<p>32 ವರ್ಷಗಳ ನಂತರ ಕಾಲೇಜು ನ್ಯಾಕ್ ಸಮಿತಿಯಿಂದ ‘ಎ’ ದರ್ಜೆಯ ಮಾನ್ಯತೆ ಗಳಿಸಿದೆ. ಎ+ ಮಾನ್ಯತೆ ಗಳಿಸಲು ಬಹುಮುಖ್ಯವಾಗಿ ಕಾಲೇಜಿಗೆ ವಿಶಾಲ ಜಾಗ ಅಗತ್ಯ. ಶೀಘ್ರದಲ್ಲಿ ಈ ಕೊರತೆ ನೀಗಿಸಿ ಕಾಲೇಜಿಗೆ ಎ+ ಮಾನ್ಯತೆ ದೊರಕಿಸುವುದು ನನ್ನ ಗುರಿಯಾಗಿದೆ. ನಿರುದ್ಯೋಗ ಸಮಸ್ಯೆಗೆ ಗಣನೀಯ ಪರಿಹಾರ ದೊರಕಿಸಿಕೊಳ್ಳಲು ಉದ್ಯೋಗ ಮೇಳವನ್ನು ಪ್ರತಿಷ್ಠಿತ ಕಂಪನಿಗಳ ಸಹಯೋಗದಲ್ಲಿ ಆಯೋಜಿಸುವ ಆಶಯ ನನ್ನದಾಗಿದೆ ಎಂದರು.</p>.<p>ಪ್ರಾಚಾರ್ಯ ರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಉದ್ಯೋಗ ಕೋಶದ ಸಂಯೋಜಕ ಜಯಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಎಸ್.ಬಿ.ಮಂಜುನಾಥ್, ಹಮೀದಾಬಾನು ಬೇಗಂ, ರಾಘವೇಂದ್ರ ಕುಮಾರ್, ಎಸ್.ಕುಮಾರ್, ತಿಮ್ಮೇಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>