ಉಪನ್ಯಾಸ ನೀಡಿದ ಕನ್ನಡ ಪ್ರಾಧ್ಯಾಪಕ ಡಾ. ಎಚ್.ಎಂ.ಮಹೇಶ್, ‘ಕೆಂಪೇಗೌಡರು ನ್ಯಾಯ, ನಿಷ್ಠೆ, ಧರ್ಮದಿಂದ ಆಡಳಿತ ನಡೆಸಿದ ಸಮರ್ಥ ಪಾಳೇಗಾರ. ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ಸಿಗಬೇಕು ಎಂಬ ಸದಾಶಯ ಹೊಂದಿದ್ದರು. ಸಾಂಸ್ಕೃತಿಕ, ಸಾಮಾಜಿಕ ಕಳಕಳಿಹೊಂದಿದ್ದ ಅವರು ದೇವಾಲಯ, ಕೆರೆಗಳು, ಉದ್ಯಾನಗಳನ್ನು ನಿರ್ಮಾಣ ಮಾಡುವ ಜತೆಗೆ ಸಾಲುಮರಗಳನ್ನು ನೆಟ್ಟು ಪೋಷಿಸಿದರು. ಕುಲಕಸುಬಿಗೆ ಅನುಗುಣವಾಗಿ ಚಿಕ್ಕಪೇಟೆ, ದೊಡ್ಡಪೇಟೆ, ಮಂಡಿಪೇಟೆ, ತರಗಿನಪೇಟೆ ಸಹಿತ 64 ಪೇಟೆಗಳನ್ನು ನಿರ್ಮಿಸಿದರು. ರಾಜ್ಯದ ಬೊಕ್ಕಸಕ್ಕೆ ಇಂದಿಗೂ ಅಲ್ಲಿಂದಲೇ ಆದಾಯ ಬರುತ್ತಿದೆ’ ಎಂದು ಹೇಳಿದರು.