<p><strong>ಕೊಟ್ಟಿಗೆಹಾರ (ಚಿಕ್ಕಮಗಳೂರು):</strong> ಇಲ್ಲಿನ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಡಿ.7ರಂದು ಪುಸ್ತಕ ಪರಿಷೆ ನಡೆಯಲಿದೆ.</p>.<p>ಬೆಳಿಗ್ಗೆ 9.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಪುಸ್ತಕ ಪ್ರಕಟಣೆ ಸವಾಲು;ಸಾಧ್ಯತೆಗಳ ಕುರಿತು ಸಂವಾದ ನಡೆಯಲಿದೆ. ರಾಜ್ಯದ ವಿವಿಧೆಡೆಯಿಂದ ಪ್ರಕಾಶಕರು, ಲೇಖಕರು ಭಾಗವಹಿಸುವರು. </p>.<p>ಸಂವಾದದಲ್ಲಿ ಪ್ರಕಾಶಕ ಆರ್.ಜಿ.ನಾಗರಾಜ್, ಹರಿವು ಬುಕ್ಸ್ನ ಪ್ರಕಾಶಕ ಬಿ.ಆರ್.ರತೀಶ್, ಮಿಂಚುಳ್ಳಿ ಪ್ರಕಾಶನದ ಸೂರ್ಯಕೀರ್ತಿ, ಅಕ್ಷಯ್ ಬಾಳೆಗೆರೆ, ವಿಕಾಸ್ ನೇಗಿಲೋಣಿ , ಕುನಾಲ್ ಕನ್ನಡಿಗ ಮತ್ತಿತರರು ಭಾಗವಹಿಸುವರು. ಬರಹದ ಆಶಯ, ಹೊಸ ತಲೆಮಾರಿನ ಸಾಹಿತ್ಯಿಕ ಜವಾಬ್ದಾರಿಗಳು ಕುರಿತ ಸಂವಾದದಲ್ಲಿ ವಿಮರ್ಶಕ ಎಚ್.ಎಸ್.ಸತ್ಯನಾರಾಯಣ, ಕವಯತ್ರಿ ಭಾಗ್ಯಜ್ಯೋತಿ ಹಿರೇಮಠ, ಜಯರಾಮಾಚಾರಿ ಭಾಗವಹಿಸುವರು.</p>.<p>ಪುಸ್ತಕ ಪರಿಷೆಯಲ್ಲಿ ಭಾಗವಹಿಸಲು 100 ಲೇಖಕರಿಗೆ ಮಾತ್ರ ಅವಕಾಶ. ₹500 ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬೇಕು. ಮಾಹಿತಿಗೆ ಮೊ. 8277589859/ 9663098873 ಸಂಪರ್ಕಿಸಬಹುದು. ಪುಸ್ತಕ ಪರಿಷೆ ಅಂಗವಾಗಿ ಡಿ.8ರಂದು ದೇವರಮನೆಗೆ ಚಾರಣ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಟ್ಟಿಗೆಹಾರ (ಚಿಕ್ಕಮಗಳೂರು):</strong> ಇಲ್ಲಿನ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಡಿ.7ರಂದು ಪುಸ್ತಕ ಪರಿಷೆ ನಡೆಯಲಿದೆ.</p>.<p>ಬೆಳಿಗ್ಗೆ 9.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಪುಸ್ತಕ ಪ್ರಕಟಣೆ ಸವಾಲು;ಸಾಧ್ಯತೆಗಳ ಕುರಿತು ಸಂವಾದ ನಡೆಯಲಿದೆ. ರಾಜ್ಯದ ವಿವಿಧೆಡೆಯಿಂದ ಪ್ರಕಾಶಕರು, ಲೇಖಕರು ಭಾಗವಹಿಸುವರು. </p>.<p>ಸಂವಾದದಲ್ಲಿ ಪ್ರಕಾಶಕ ಆರ್.ಜಿ.ನಾಗರಾಜ್, ಹರಿವು ಬುಕ್ಸ್ನ ಪ್ರಕಾಶಕ ಬಿ.ಆರ್.ರತೀಶ್, ಮಿಂಚುಳ್ಳಿ ಪ್ರಕಾಶನದ ಸೂರ್ಯಕೀರ್ತಿ, ಅಕ್ಷಯ್ ಬಾಳೆಗೆರೆ, ವಿಕಾಸ್ ನೇಗಿಲೋಣಿ , ಕುನಾಲ್ ಕನ್ನಡಿಗ ಮತ್ತಿತರರು ಭಾಗವಹಿಸುವರು. ಬರಹದ ಆಶಯ, ಹೊಸ ತಲೆಮಾರಿನ ಸಾಹಿತ್ಯಿಕ ಜವಾಬ್ದಾರಿಗಳು ಕುರಿತ ಸಂವಾದದಲ್ಲಿ ವಿಮರ್ಶಕ ಎಚ್.ಎಸ್.ಸತ್ಯನಾರಾಯಣ, ಕವಯತ್ರಿ ಭಾಗ್ಯಜ್ಯೋತಿ ಹಿರೇಮಠ, ಜಯರಾಮಾಚಾರಿ ಭಾಗವಹಿಸುವರು.</p>.<p>ಪುಸ್ತಕ ಪರಿಷೆಯಲ್ಲಿ ಭಾಗವಹಿಸಲು 100 ಲೇಖಕರಿಗೆ ಮಾತ್ರ ಅವಕಾಶ. ₹500 ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬೇಕು. ಮಾಹಿತಿಗೆ ಮೊ. 8277589859/ 9663098873 ಸಂಪರ್ಕಿಸಬಹುದು. ಪುಸ್ತಕ ಪರಿಷೆ ಅಂಗವಾಗಿ ಡಿ.8ರಂದು ದೇವರಮನೆಗೆ ಚಾರಣ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>