ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಟ್ಟಿಗೆಹಾರ: ಸಂಬಳ ಕೊಡದಿದ್ದಕ್ಕೆ ಟಿಪ್ಪರ್‌ ಕದ್ದೊಯ್ದ ಚಾಲಕ!

Last Updated 7 ಮೇ 2020, 9:35 IST
ಅಕ್ಷರ ಗಾತ್ರ

ಕೊಟ್ಟಿಗೆಹಾರ: ಸಂಬಳ ಕೊಡಲಿಲ್ಲ ಎಂಬ ಕಾರಣಕ್ಕೆ ಚಾಲಕನೊಬ್ಬ ಟಿಪ್ಪರ್‌ ಕದ್ದೊಯ್ದು, ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಕೊಟ್ಟಿಗೆಹಾರದಲ್ಲಿ ಮಂಗಳವಾರ ನಡೆದಿದೆ.

ಕಡೂರಿನಿಂದ ಕೊಟ್ಟಿಗೆಹಾರ ಮಾರ್ಗವಾಗಿ ಮೂಡುಬಿದಿರೆಗೆ ಟಿಪ್ಪರ್‌ನಲ್ಲಿ ಹೊರಟಿದ್ದ ಚಾಲಕ ರಂಗಪ್ಪನನ್ನು ಪೊಲೀಸರು ಕೊಟ್ಟಿಗೆಹಾರ ಚೆಕ್‍ಪೋಸ್ಟ್ ನಿಲ್ಲಿಸಿ ವಿಚಾರಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.

ಕಡೂರಿನ ಪ್ರಭಾಕರ್ ಅವರ ಟಿಪ್ಪರ್‌ಗೆ ರಂಗಪ್ಪ ಮೂರು ವರ್ಷಗಳಿಂದ ಚಾಲಕನಾಗಿದ್ದು, ಮಾಲೀಕರು ಮೂರು ತಿಂಗಳಿನಿಂದ ಸಂಬಳ ನೀಡಿಲ್ಲ ಎಂದು ಪೊಲೀಸರಿಗೆ ಚಾಲಕ ತಿಳಿಸಿದ್ದಾನೆ.

ರಂಗಪ್ಪನ ಕುಟುಂಬ ದಕ್ಷಿಣ ಕನ್ನಡದ ಮೂಡುಬಿದಿರೆಯಲ್ಲಿ ವಾಸವಾಗಿರುವುದರಿಂದ ಆ ಭಾಗಕ್ಕೆ ಹೋಗಲು ನಿರ್ಬಂಧ ಇರುವುದರಿಂದ ಟಿಪ್ಪರ್‌ನಲ್ಲಾದರೂ ಹೋಗಿ ಮನೆ ಮುಟ್ಟಬಹುದು ಎಂದು ಮಾಲೀಕರ ಗಮನಕ್ಕೆ ತರದೇ ತಂದಿದ್ದಾನೆ. ಬಣಕಲ್ ಪೊಲೀಸರು ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT