ಕೊಟ್ಟಿಗೆಹಾರ: ಸಂಬಳ ಕೊಡಲಿಲ್ಲ ಎಂಬ ಕಾರಣಕ್ಕೆ ಚಾಲಕನೊಬ್ಬ ಟಿಪ್ಪರ್ ಕದ್ದೊಯ್ದು, ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಕೊಟ್ಟಿಗೆಹಾರದಲ್ಲಿ ಮಂಗಳವಾರ ನಡೆದಿದೆ.
ಕಡೂರಿನಿಂದ ಕೊಟ್ಟಿಗೆಹಾರ ಮಾರ್ಗವಾಗಿ ಮೂಡುಬಿದಿರೆಗೆ ಟಿಪ್ಪರ್ನಲ್ಲಿ ಹೊರಟಿದ್ದ ಚಾಲಕ ರಂಗಪ್ಪನನ್ನು ಪೊಲೀಸರು ಕೊಟ್ಟಿಗೆಹಾರ ಚೆಕ್ಪೋಸ್ಟ್ ನಿಲ್ಲಿಸಿ ವಿಚಾರಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.
ಕಡೂರಿನ ಪ್ರಭಾಕರ್ ಅವರ ಟಿಪ್ಪರ್ಗೆ ರಂಗಪ್ಪ ಮೂರು ವರ್ಷಗಳಿಂದ ಚಾಲಕನಾಗಿದ್ದು, ಮಾಲೀಕರು ಮೂರು ತಿಂಗಳಿನಿಂದ ಸಂಬಳ ನೀಡಿಲ್ಲ ಎಂದು ಪೊಲೀಸರಿಗೆ ಚಾಲಕ ತಿಳಿಸಿದ್ದಾನೆ.
ರಂಗಪ್ಪನ ಕುಟುಂಬ ದಕ್ಷಿಣ ಕನ್ನಡದ ಮೂಡುಬಿದಿರೆಯಲ್ಲಿ ವಾಸವಾಗಿರುವುದರಿಂದ ಆ ಭಾಗಕ್ಕೆ ಹೋಗಲು ನಿರ್ಬಂಧ ಇರುವುದರಿಂದ ಟಿಪ್ಪರ್ನಲ್ಲಾದರೂ ಹೋಗಿ ಮನೆ ಮುಟ್ಟಬಹುದು ಎಂದು ಮಾಲೀಕರ ಗಮನಕ್ಕೆ ತರದೇ ತಂದಿದ್ದಾನೆ. ಬಣಕಲ್ ಪೊಲೀಸರು ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.