<p><strong>ಕೊಟ್ಟಿಗೆಹಾರ</strong>: ಸಂಬಳ ಕೊಡಲಿಲ್ಲ ಎಂಬ ಕಾರಣಕ್ಕೆ ಚಾಲಕನೊಬ್ಬ ಟಿಪ್ಪರ್ ಕದ್ದೊಯ್ದು, ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಕೊಟ್ಟಿಗೆಹಾರದಲ್ಲಿ ಮಂಗಳವಾರ ನಡೆದಿದೆ.</p>.<p>ಕಡೂರಿನಿಂದ ಕೊಟ್ಟಿಗೆಹಾರ ಮಾರ್ಗವಾಗಿ ಮೂಡುಬಿದಿರೆಗೆ ಟಿಪ್ಪರ್ನಲ್ಲಿ ಹೊರಟಿದ್ದ ಚಾಲಕ ರಂಗಪ್ಪನನ್ನು ಪೊಲೀಸರು ಕೊಟ್ಟಿಗೆಹಾರ ಚೆಕ್ಪೋಸ್ಟ್ ನಿಲ್ಲಿಸಿ ವಿಚಾರಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.</p>.<p>ಕಡೂರಿನ ಪ್ರಭಾಕರ್ ಅವರ ಟಿಪ್ಪರ್ಗೆ ರಂಗಪ್ಪ ಮೂರು ವರ್ಷಗಳಿಂದ ಚಾಲಕನಾಗಿದ್ದು, ಮಾಲೀಕರು ಮೂರು ತಿಂಗಳಿನಿಂದ ಸಂಬಳ ನೀಡಿಲ್ಲ ಎಂದು ಪೊಲೀಸರಿಗೆ ಚಾಲಕ ತಿಳಿಸಿದ್ದಾನೆ.</p>.<p>ರಂಗಪ್ಪನ ಕುಟುಂಬ ದಕ್ಷಿಣ ಕನ್ನಡದ ಮೂಡುಬಿದಿರೆಯಲ್ಲಿ ವಾಸವಾಗಿರುವುದರಿಂದ ಆ ಭಾಗಕ್ಕೆ ಹೋಗಲು ನಿರ್ಬಂಧ ಇರುವುದರಿಂದ ಟಿಪ್ಪರ್ನಲ್ಲಾದರೂ ಹೋಗಿ ಮನೆ ಮುಟ್ಟಬಹುದು ಎಂದು ಮಾಲೀಕರ ಗಮನಕ್ಕೆ ತರದೇ ತಂದಿದ್ದಾನೆ. ಬಣಕಲ್ ಪೊಲೀಸರು ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಟ್ಟಿಗೆಹಾರ</strong>: ಸಂಬಳ ಕೊಡಲಿಲ್ಲ ಎಂಬ ಕಾರಣಕ್ಕೆ ಚಾಲಕನೊಬ್ಬ ಟಿಪ್ಪರ್ ಕದ್ದೊಯ್ದು, ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಕೊಟ್ಟಿಗೆಹಾರದಲ್ಲಿ ಮಂಗಳವಾರ ನಡೆದಿದೆ.</p>.<p>ಕಡೂರಿನಿಂದ ಕೊಟ್ಟಿಗೆಹಾರ ಮಾರ್ಗವಾಗಿ ಮೂಡುಬಿದಿರೆಗೆ ಟಿಪ್ಪರ್ನಲ್ಲಿ ಹೊರಟಿದ್ದ ಚಾಲಕ ರಂಗಪ್ಪನನ್ನು ಪೊಲೀಸರು ಕೊಟ್ಟಿಗೆಹಾರ ಚೆಕ್ಪೋಸ್ಟ್ ನಿಲ್ಲಿಸಿ ವಿಚಾರಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.</p>.<p>ಕಡೂರಿನ ಪ್ರಭಾಕರ್ ಅವರ ಟಿಪ್ಪರ್ಗೆ ರಂಗಪ್ಪ ಮೂರು ವರ್ಷಗಳಿಂದ ಚಾಲಕನಾಗಿದ್ದು, ಮಾಲೀಕರು ಮೂರು ತಿಂಗಳಿನಿಂದ ಸಂಬಳ ನೀಡಿಲ್ಲ ಎಂದು ಪೊಲೀಸರಿಗೆ ಚಾಲಕ ತಿಳಿಸಿದ್ದಾನೆ.</p>.<p>ರಂಗಪ್ಪನ ಕುಟುಂಬ ದಕ್ಷಿಣ ಕನ್ನಡದ ಮೂಡುಬಿದಿರೆಯಲ್ಲಿ ವಾಸವಾಗಿರುವುದರಿಂದ ಆ ಭಾಗಕ್ಕೆ ಹೋಗಲು ನಿರ್ಬಂಧ ಇರುವುದರಿಂದ ಟಿಪ್ಪರ್ನಲ್ಲಾದರೂ ಹೋಗಿ ಮನೆ ಮುಟ್ಟಬಹುದು ಎಂದು ಮಾಲೀಕರ ಗಮನಕ್ಕೆ ತರದೇ ತಂದಿದ್ದಾನೆ. ಬಣಕಲ್ ಪೊಲೀಸರು ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>