‘ಯುವಕನ ರಕ್ತ ಪರೀಕ್ಷೆ ವರದಿ ಇದೇ 21ರಂದು ಕೈಸೇರಿದ್ದು, ಕೆಎಫ್ಡಿ ದೃಢಪಟ್ಟಿದೆ. ಯುವಕ ತೀರ್ಥಹಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖ ರಾಗಿ ಮನೆಯಲ್ಲಿ ಇದ್ದಾರೆ. ಪ್ಲಾಂಟೇಷನ್ ಭಾಗದಲ್ಲಿ ಇಬ್ಬರಿಗೆ ಜ್ವರ ಕಂಡುಬಂದಿದೆ. ರಕ್ತ, ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿದೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್.ಕೆ. ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.