ದರ್ಶನ್ ಅವರು ಬುಕ್ಕಾಂಬುಧಿಯ ನಂಜುಂಡಮೂರ್ತಿ ಮತ್ತು ಉಮಾ ದಂಪತಿ ಪುತ್ರ. ಜುಲೈ 1ರಂದು ತಾಯಿಗೆ ಫೋನ್ನಲ್ಲಿ ಮಾತನಾಡಿದ್ದ ದರ್ಶನ್ ಮತ್ತೆ ಸಂಪರ್ಕಕ್ಕೆ ಲಭ್ಯವಾಗಿಲ್ಲ. ಉಮಾ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ದರ್ಶನ್ ಜೂನ್ 21ರಂದು ಬೆಂಗಳೂರಿನಿಂದ ಅಮರನಾಥ ಯಾತ್ರೆಗೆ ತೆರಳಿದ್ದ. 12 ದಿನಗಳ ನಂತರ ವಾಪಸ್ ಬರುವುದಾಗಿ ಹೇಳಿದ್ದ. ಭಾನುವಾರ ಸಂಜೆ 4 ಗಂಟೆ ಹೊತ್ತಿಗೆ ಫೋನ್ ಮಾಡಿ, ಆದಿ ಕೈಲಾಸ ಪರ್ವತ ನೋಡಲು ಹೋಗುತ್ತಿದ್ದೇನೆ ಎಂದು ತಿಳಿಸಿದ್ದ. ಆ ನಂತರ ಮತ್ತೆ ಸಂಪರ್ಕಕ್ಕೆ ಸಿಕ್ಕಿಲ್ಲ’ ಎಂದು ತಿಳಿಸಿದರು.