ಬೆಂಗಳೂರು: ಎನ್.ವೆಂಕಟೇಶ್ ಬಾಬು ಸೇರಿದಂತೆ ನಾಲ್ವರು ಸ್ಪರ್ಧಿಗಳನ್ನು ಒಳಗೊಂಡ ಕರ್ನಾಟಕ ಪುರುಷರ ತಂಡ ಮಾರ್ಚ್ 8ರಿಂದ ಆರಂಭವಾಗುವ 11ನೇ ರಾಷ್ಟ್ರೀಯ ವ್ಹೀಲ್ಚೇರ್ ಫೆನ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳಲಿದೆ.
ಮಣಿಪುರದ ಇಂಪಾಲದಲ್ಲಿ ಟೂರ್ನಿ ನಡೆಯಲಿದೆ.
ತಂಡ ಇಂತಿದೆ: ತ್ಯಾಗರಾಜ, ಎನ್.ವೆಂಕಟೇಶ್ಬಾಬು, ತಮ್ಮಣ್ಣ, ಪೃಥ್ವಿ ಇದ್ದಾರೆ.
ಕೋಚ್ ಇರೋಮ್ ದೇವನ್ ಸಿಂಗ್ ಕೂಡ ಈಗಾಗಲೇ ತಂಡದೊಂದಿಗೆ ಮಣಿಪುರಕ್ಕೆ ತೆರಳಿದ್ದಾರೆ.