ಚಿಕ್ಕಮಗಳೂರು: ತಾಲ್ಲೂಕಿನ ಕದ್ರಿ ಮಿದ್ರಿ ಬಳಿಯ ನೀಲಗಿರಿ ತೋಪಿನಲ್ಲಿ ಗವನಹಳ್ಳಿ ಹಾಗೂ ಆದಿಶಕ್ತಿ ನಗರದ ಯುವಕರ ನಡುವೆ ಗುಂಪುಘರ್ಷಣೆ ನಡೆದಿದ್ದು, ಆದಿ ಶಕ್ತಿನಗರದ ಪವನ್(21) ಅವರಿಗೆ ಚಾಕುವಿನಿಂದ ಇರಿದು ಭಾನುವಾರ ಸಂಜೆ ಹತ್ಯೆ ಮಾಡಲಾಗಿದೆ.
ಪವನ್ ಜತೆಯಲ್ಲಿದ್ದ ಆತನ ಸ್ನೇಹಿತ ಪವನ್(34) ಅವರ ತೊಡೆ ಹಾಗೂ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದು, ಅರಳಗುಪ್ಪೆ ಮಲ್ಲೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆದಿಶಕ್ತಿ ನಗರದ ಪವನ್ ಒಳಗೊಂಡಂತೆ 6 ಮಂದಿ ಯುವಕರು ಫೋಟೋ ಶೂಟ್ ಮಾಡಲೆಂದು ನೀಲಗಿರಿ ತೋಪಿಗೆ ತೆರಳಿದ್ದಾರೆ. ಕಾರಿನಲ್ಲಿ ಬಂದ ಗವನಹಳ್ಳಿಯ ಕಿರಣ್ ಒಳಗೊಂಡಂತೆ ಐದು ಮಂದಿ ಅದನ್ನು ಪ್ರಶ್ನಿಸಿದ್ದಾರೆ.
ಯುವಕರ ನಡುವೆ ಮಾತಿನ ಚಕಮಕಿ ನಡೆದು ಕೊಲೆಯಲ್ಲಿ ಅಂತ್ಯಗೊಂಡಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.