ಎಐಟಿಯುಸಿ ಸಂಯೋಜಿತ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಶನ್ ರಾಜ್ಯ ಸಮಿತಿ ನೇತೃತ್ವದಲ್ಲಿ ಧರಣಿ ನಡೆಯಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಸಿಯುಟ ತಯಾರಿಕರಿಗೆ ₹6 ಸಾವಿರ ಮಾಸಿಕ ವೇತನ ನೀಡುವುದಾಗಿ ಗ್ಯಾರಂಟಿ ನೀಡಿತ್ತು. ಅದನ್ನು ಸರ್ಕಾರ ಕೂಡಲೇ ಅನುಷ್ಠಾನಗೊಳಿಸಬೇಕು. ಎಡಿಎಂಸಿ ಅಧ್ಯಕ್ಷ, ಮುಖ್ಯ ಶಿಕ್ಷಕರ ಬ್ಯಾಂಕ್ ಜಂಟಿ ಖಾತೆ ಆದೇಶ ರದ್ದುಗೊಳಿಸಿ, ಮೊದಲಿನಂತೆ ಮುಖ್ಯ ಶಿಕ್ಷಕ ಮತ್ತು ಅಡುಗೆ ಸಹಾಯಕಿಯರ ಜಂಟಿ ಖಾತೆ ಮುಂದುವರಿಸಬೇಕು. ನಿವೃತ್ತಿಯಾದ ಬಿಸಿಯೂಟ ತಯಾರಕರಿಗೆ ಎರಡು ಲಕ್ಷ ಇಡು ಗಂಟು ನೀಡಬೇಕು. ಅಡುಗೆ ಮಾಡುವಾಗ ಅನಾಹುತ ಸಂಭವಿಸಿ ಮೃತಪಟ್ಟ ಅಡುಗೆ ಸಹಾಯಕಿಯರಿಗೆ ₹25 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.