ಕಾಯಕ್ರಮ ಹೇಗೆ ಆಯೋಜನೆ ಮಾಡಬೇಕು, ಆಹ್ವಾನಪತ್ರಿಕೆಯಲ್ಲಿ ಹೆಸರು ಯಾವ ಕ್ರಮದಲ್ಲಿ ಹಾಕಬೇಕು ಎಂಬ ಕನಿಷ್ಠ ಮಾಹಿತಿಯೂ ಗೊತ್ತಿಲ್ಲ. ವಿಧಾನಸಭೆ, ಪರಿಷತ್ತು, ಲೋಕಸಭೆ, ರಾಜ್ಯಸಭೆ ಸದಸ್ಯರು ಎಂಬ ತಾರತಮ್ಯ ಇಲ್ಲ. ಈ ಬಗ್ಗೆಯೂ ಮಾಹಿತಿ ಕೊರತೆ ಇದೆ. ಸುತ್ತೋಲೆಗಳನ್ನು ಸರಿಯಾಗಿ ಓದುವುದಿಲ್ಲ, ಅರ್ಥೈಸಿಕೊಳ್ಳುವುದಿಲ್ಲ. ಕೆಲವರಿಗೆ ತಿಳಿವಳಿಕೆ ಕೊರತೆ, ಮತ್ತೆ ಕೆಲವು ಉಡಾಫೆ ಮಾಡುತ್ತಾರೆ ಎಂದರು.