<p><strong>ಕಳ್ಳಿಕೊಪ್ಪ (ನರಸಿಂಹರಾಜಪುರ)</strong>: ತಾಲ್ಲೂಕಿನ ಕಳ್ಳಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಣಿವೆ ನಾಗ ಪ್ರತಿಷ್ಠಾನ ವತಿಯಿಂದ ಪ್ರಿಂಟರ್ ಹಾಗೂ ಯುಪಿಎಸ್ ಅನ್ನು ಈಚೆಗೆ ವಿತರಿಸಲಾಯಿತು.</p>.<p>ಬಳಿಕ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ಕಣಿವೆ ವಿನಯ್, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿದ್ದು, ಗುಣ ಮಟ್ಟದ ಶಿಕ್ಷಣ ಸಿಗುತ್ತಿದೆ ಎಂದು ತಿಳಿಸಿದರು. </p>.<p>ಕಣಿವೆ ನಾಗ ಪ್ರತಿಷ್ಠಾನವು ಈಗಾಗಲೇ 16 ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ನೀಡಿದೆ. ಇಂದು ಪ್ರಿಂಟರ್ ಹಾಗೂ ಯುಪಿಎಸ್ ನೀಡಿದ್ದು ಸಂತಸ ತಂದಿದೆ. ಇಂಗ್ಲೀಷ್ ವ್ಯಾಮೋಹದಿಂದಾಗಿ ಮಕ್ಕಳನ್ನು ಪೋಷಕರು ಖಾಸಗಿ ಶಾಲೆಗೆ ಕಳಿಸುತ್ತಿರುವುದರಿಂದ ಸರ್ಕಾರಿ ಶಾಲೆಗಳು ಮುಚ್ಚು ಹಂತ ತಲುಪಿವೆ. ಮಕ್ಕಳ ದಾಖಲಾತಿ ಸಂಖ್ಯೆ ಕಡಿಮೆಯಾಗುತ್ತಿದೆ. ಮಕ್ಕಳು ಸರ್ಕಾರಿ ಶಾಲೆಗೆ ಬರುವಂತೆ ಉತ್ತೇಜನ ನೀಡುವ ಉದ್ದೇಶದಿಂದ ರೋಟರಿ ಸಂಸ್ಥೆಯು ಸರ್ಕಾರಿ ಶಾಲೆಗಳಿಗೆ ಹೆಚ್ಚು ಕೊಡುಗೆ ನೀಡುತ್ತಿದೆ ಎಂದರು.</p>.<p>ರೋಟರಿ ಕ್ಲಬ್ನ ನಿಯೋಜಿತ ಅಧ್ಯಕ್ಷ ಪಿ.ಎಸ್.ವಿದ್ಯಾನಂದಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ರೋಟರಿ ಜಿಲ್ಲಾ ಕಲ್ಚರ್ ಚೇರ್ಮನ್ ಎಚ್.ಡಿ.ವಿನಯ, ರೋಟರಿ ಕಾರ್ಯದರ್ಶಿ ಕಟಗಳಲೆ ಲೋಕೇಶ್, ಪೂರ್ವಾಧ್ಯಕ್ಷರಾದ ಜಿ.ಆರ್.ದಿವಾಕರ, ಎನ್.ಟಿ.ಶೇಷಾಚಲ, ಖಜಾಂಚಿ ಅಭಿಷೇಕ್, ಸದಸ್ಯರಾದ ರಕ್ಷಿತ್, ಮನೋಜ್, ಲಕ್ಷ್ಮಿನಾರಾಯಣ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಎಂ.ಸತೀಶ್, ಶಾಲಾ ಮುಖ್ಯಶಿಕ್ಷಕಿ ಬೀನಾ ಮ್ಯಾಥ್ಯೂ, ಶಿಕ್ಷಕಿ ವಿನೂತ, ಎಸ್ಡಿಎಂಸಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಳ್ಳಿಕೊಪ್ಪ (ನರಸಿಂಹರಾಜಪುರ)</strong>: ತಾಲ್ಲೂಕಿನ ಕಳ್ಳಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಣಿವೆ ನಾಗ ಪ್ರತಿಷ್ಠಾನ ವತಿಯಿಂದ ಪ್ರಿಂಟರ್ ಹಾಗೂ ಯುಪಿಎಸ್ ಅನ್ನು ಈಚೆಗೆ ವಿತರಿಸಲಾಯಿತು.</p>.<p>ಬಳಿಕ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ಕಣಿವೆ ವಿನಯ್, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿದ್ದು, ಗುಣ ಮಟ್ಟದ ಶಿಕ್ಷಣ ಸಿಗುತ್ತಿದೆ ಎಂದು ತಿಳಿಸಿದರು. </p>.<p>ಕಣಿವೆ ನಾಗ ಪ್ರತಿಷ್ಠಾನವು ಈಗಾಗಲೇ 16 ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ನೀಡಿದೆ. ಇಂದು ಪ್ರಿಂಟರ್ ಹಾಗೂ ಯುಪಿಎಸ್ ನೀಡಿದ್ದು ಸಂತಸ ತಂದಿದೆ. ಇಂಗ್ಲೀಷ್ ವ್ಯಾಮೋಹದಿಂದಾಗಿ ಮಕ್ಕಳನ್ನು ಪೋಷಕರು ಖಾಸಗಿ ಶಾಲೆಗೆ ಕಳಿಸುತ್ತಿರುವುದರಿಂದ ಸರ್ಕಾರಿ ಶಾಲೆಗಳು ಮುಚ್ಚು ಹಂತ ತಲುಪಿವೆ. ಮಕ್ಕಳ ದಾಖಲಾತಿ ಸಂಖ್ಯೆ ಕಡಿಮೆಯಾಗುತ್ತಿದೆ. ಮಕ್ಕಳು ಸರ್ಕಾರಿ ಶಾಲೆಗೆ ಬರುವಂತೆ ಉತ್ತೇಜನ ನೀಡುವ ಉದ್ದೇಶದಿಂದ ರೋಟರಿ ಸಂಸ್ಥೆಯು ಸರ್ಕಾರಿ ಶಾಲೆಗಳಿಗೆ ಹೆಚ್ಚು ಕೊಡುಗೆ ನೀಡುತ್ತಿದೆ ಎಂದರು.</p>.<p>ರೋಟರಿ ಕ್ಲಬ್ನ ನಿಯೋಜಿತ ಅಧ್ಯಕ್ಷ ಪಿ.ಎಸ್.ವಿದ್ಯಾನಂದಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ರೋಟರಿ ಜಿಲ್ಲಾ ಕಲ್ಚರ್ ಚೇರ್ಮನ್ ಎಚ್.ಡಿ.ವಿನಯ, ರೋಟರಿ ಕಾರ್ಯದರ್ಶಿ ಕಟಗಳಲೆ ಲೋಕೇಶ್, ಪೂರ್ವಾಧ್ಯಕ್ಷರಾದ ಜಿ.ಆರ್.ದಿವಾಕರ, ಎನ್.ಟಿ.ಶೇಷಾಚಲ, ಖಜಾಂಚಿ ಅಭಿಷೇಕ್, ಸದಸ್ಯರಾದ ರಕ್ಷಿತ್, ಮನೋಜ್, ಲಕ್ಷ್ಮಿನಾರಾಯಣ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಎಂ.ಸತೀಶ್, ಶಾಲಾ ಮುಖ್ಯಶಿಕ್ಷಕಿ ಬೀನಾ ಮ್ಯಾಥ್ಯೂ, ಶಿಕ್ಷಕಿ ವಿನೂತ, ಎಸ್ಡಿಎಂಸಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>