ಜೀರಿಗೆ ಮೆಣಸಿಗೆ ಕೆ.ಜಿಗೆ ಸಾಮಾನ್ಯವಾಗಿ ₹600 ರಿಂದ ₹800ರ ಆಸುಪಾಸಿನಲ್ಲಿ ದರ ಇರುತ್ತಿತ್ತು. ಆದರೆ, ಈ ಬಾರಿ ಮಳೆ ಕೊರತೆಯಿಂದಾಗಿ ಬೆಳೆ ನಾಶವಾಗಿದ್ದು, ಇಳುವರಿ ಕುಂಠಿತವಾಗಿದೆ. ತೋಟಗಳಲ್ಲಿ ಕಳೆನಾಶಕ ಸಿಂಪಡಣೆ, ಯಂತ್ರಗಳ ಸಹಾಯದಿಂದ ಕಳೆ ತೆಗೆಯುವ ಸಂದರ್ಭದಲ್ಲಿ ಮೆಣಸಿನ ಗಿಡಗಳು ನಾಶವಾಗಿದೆ. ಕಳಸ, ಶೃಂಗೇರಿ, ಕೊಪ್ಪ, ಜಯಪುರದ ಮಾರುಕಟ್ಟೆಯಲ್ಲಿ ಈ ಹಿಂದೆ ತಿಂಗಳಿಗೆ ಕ್ವಿಂಟಲ್ಗಟ್ಟಲೆ ಸಂಗ್ರಹವಾಗುತ್ತಿದ್ದ ಗಾಂಧಾರಿ ಮೆಣಸು ಈ ವರ್ಷ ಕೆ.ಜಿ. ಲೆಕ್ಕಕ್ಕೆ ಇಳಿದಿದೆ.