1955ರಲ್ಲಿ ಮೈಸೂರು ಸಂಸ್ಥಾನದ ಮುಖ್ಯಮುಂತ್ರಿ ಹನುಮಂತಯ್ಯ ಈ ಎರಡು ಸೇತುವೆಗಳಿಗೆ ಶಂಕುಸ್ಥಾಪನೆ ನೇರವೇರಿಸಿದ್ದು, 1960 ಮೇ 18ರಿಂದ ವಾಹನ ಸಂಚಾರ ಪ್ರಾರಂಭಗೊಂಡಿತ್ತು. ಈಗ ಶೃಂಗೇರಿ ಕ್ಷೇತ್ರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು ವಾಹನಗಳ ದಟ್ಟಣೆ ಹೆಚ್ಚಿದೆ. ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರಿಗೆ ಸಂಪರ್ಕ ಸಾಧಿಸುವ ಈ ರಸ್ತೆಯು 21 ಕಿ.ಮೀ. ಉದ್ದದಷ್ಟು ಅಗಲ ಕಿರಿದಾಗಿದೆ. ಕೇವಲ 3.5 ಮೀ ಅಗಲದ ಈ ರಸ್ತೆ ಮತ್ತು ಸೇತುವೆಯಲ್ಲಿ ಘನವಾಹನ ಚಲಿಸಲು ಹರಸಾಹಸ ಪಡಬೇಕಾಗಿದೆ. ಹಲವೆಡೆ ರಸ್ತೆ ಮತ್ತು ಸೇತುವೆಗಳು ತಗ್ಗಿನಲ್ಲಿವೆ. ಮಳೆಗಾಲದಲ್ಲಿ ಜಲಾವೃತಗೊಳ್ಳುತ್ತವೆ. ಸೇತುವೆ ಸಂಪರ್ಕ ಕಡಿತಗೊಂಡರೆ, ಕೆರೆಕಟ್ಟೆ ಭಾಗದ ಜನರು ಪಟ್ಟಣಕ್ಕೆಂದು ಕಾರ್ಕಳಕ್ಕೆ ತೆರಳಬೇಕಾಗುತ್ತದೆ.