ಹಿಂದಿಭಾಷೆಗೆ ವಿಶೇಷ ಸ್ಥಾನಮಾನ ನೀಡಿರುವ ಸಂವಿಧಾನದ 344 ಹಾಗೂ 351 ವಿಧಿ ರದ್ದುಪಡಿಸಬೇಕು. ಸಂವಿಧಾನದ 8ನೇ ಅನುಸೂಚಿಯಲ್ಲಿರುವ ಕನ್ನಡ ಸಹಿತ 22 ಭಾಷೆಗಳನ್ನು ಸಮಾನವಾಗಿ ಪರಿಗಣಿಸಬೇಕು. ಜತೆಗೆ ತಳು, ಕುರುಂಬ, ಕೊಡವ, ಹವ್ಯಕ, ಬಡಗ ಭಾಷೆಗಳನ್ನು ರಕ್ಷಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಕನ್ನಡ ಭಾಷೆ ಅಭಿವ್ಯಕ್ತಿ ಮಾಧ್ಯಮ ಮಾತ್ರವಲ್ಲ. ಅದು ಸ್ಥಳೀಯ ಸಂಸ್ಕೃತಿ, ಕಲೆ, ಸಾಹಿತ್ಯದ, ಧರ್ಮ, ಪ್ರಾದೇಶಿಕ ವೈಶಿಷ್ಟತೆ ಬಿಂಬಿಸುವ ಪ್ರಬಲವಾದ ಸಂಕೇತವಾಗಿದೆ. ಹಿಂದಿ ಭಾಷೆ ಹೇರಿಕೆಯಿಂದ ಚಾರಿತ್ರಿಕ ಮಹತ್ವವುಳ್ಳ ಕನ್ನಡವನ್ನು ಎರಡನೇ ದರ್ಜೆ ಭಾಷೆಯಾಗಿಸಲು ಕೇಂದ್ರಸರ್ಕಾರ ಷಡ್ಯಂತ್ರ ನಡೆಸಿದೆ ಎಂದು ಕಾರ್ಯಕರ್ತರು ಆರೋಪಿಸಿದರು.
ಜೆಡಿಎಸ್ ರಾಜ್ಯಘಟಕದ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮಾತನಾಡಿ, ಬೆಂಗಳೂರಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕನ್ನಡಧ್ವಜಾರೋಹಣ ಮಾಡಿದ್ದಾರೆ. ಸಚಿವರಾಗುವ ಮೊದಲು ಸಿ.ಟಿ.ರವಿ ಅವರು ಕನ್ನಡಧ್ವಜಕ್ಕೆ ಒತ್ತು ನೀಡುತ್ತಿದ್ದರು. ಅವರು ಅಧಿಕಾರ ದೊರೆತಾಗ ಭಾಷಾಭಿಮಾನ ಮರೆತಿದ್ದಾರೆ ಎಂದು ಟೀಕಿಸಿದರು.