ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗುರುಶಾಂತಪ್ಪ ಮಾತನಾಡಿ, '13 ವರ್ಷದಿಂದ ಮತ್ತಿಕೆರೆ, ಗಂಜಲಗೂಡು, ಬಾಣಾವರ, ಹಳುವಳ್ಳಿ, ಹಾದಿಹಳ್ಳಿ ರಸ್ತೆ ದುರಸ್ತಿ ಕಾಣದೇ ಗುಂಡಿ ಗೊಚ್ಚೆಯಲ್ಲಿ ತಿರುಗಾಡುವಂತಾಗಿದೆ. ಗ್ರಾಮದ ಜನರು, ರೋಗಿಗಳು ಹಾಗೂ ವಿದ್ಯಾರ್ಥಿಗಳು ಕಳೆದ 13 ವರ್ಷದಿಂದ ರಸ್ತೆ ದುರಸ್ತಿ ಕಾಣದೇ ಸಂಕಷ್ಟ ಎದುರಿಸುವಂತಾಗಿದೆ. ಈ ಬಗ್ಗೆ ಅನೇಕ ಬಾರಿ ಶಾಸಕರ ಗಮನಕ್ಕೆ ತಂದರೂ ತಲೆ ಕೆಡಿಸಿಕೊಂಡಿಲ್ಲ’ ಎಂದು ದೂರಿದರು.