<p><strong>ಕಡೂರು:</strong> ತಾಲ್ಲೂಕಿನ ಎಂ.ಕೋಡಿಹಳ್ಳಿ ಕೆರೆ ಬದಿಯಲ್ಲಿರುವ 1,000 ವರ್ಷ ಹಳೆಯ ಕಲ್ಲೇಶ್ವರ ತ್ರಿಕೂಟ ದೇವಸ್ಥಾನದಲ್ಲಿ ಬುಧವಾರ ರಾತ್ರಿ ನೆಲಹಾಸನ್ನು ಬಗೆದು ಹಾಕಲಾಗಿದೆ. ನಿಧಿಯ ಆಸೆಗಾಗಿ ಈ ಕೆಲಸ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. </p>.<p>ದೇವಸ್ಥಾನಕ್ಕೆ ಮೂರು ಬಾಗಿಲುಗಳಿದ್ದು, ನವರಂಗದಲ್ಲಿ ನಾಟ್ಯ ವೃತ್ತವಿದೆ. ಈ ವೃತ್ತದಲ್ಲಿದ್ದ ಬಸವಣ್ಣ ವಿಗ್ರಹವನ್ನು ಬದಿಗಿರಿಸಿ ಅದರಡಿಯಲ್ಲಿದ್ದ ಸುಮಾರು ಮೂರು ಅಡಿ ದಪ್ಪದ ಕಲ್ಲು ಚಪ್ಪಡಿಯನ್ನು ಚೈನ್ ಉಪಯೋಗಿಸಿ ಮೇಲಕ್ಕೆತ್ತಿ, ಐದು ಅಡಿಗೂ ಹೆಚ್ಚು ಆಳ ಹಾಗೂ ಅಡ್ಡದಲ್ಲಿ ಎಂಟು ಅಡಿಗೂ ಹೆಚ್ಚು ಬಗೆಯಲಾಗಿದೆ.</p>.<p>ನವರಂಗದಲ್ಲಿರುವ ನಾಲ್ಕು ಕಂಬಗಳ ಬಳಿಯೂ ತಾಮ್ರದ ತಗಡು, ಸಣ್ಣ ಮಡಕೆ, ನಿಂಬೆಹಣ್ಣು ಮುಂತಾದವುಗಳನ್ನು ಇಟ್ಟು ಪೂಜೆ ಮಾಡಿರುವುದು ನೋಡಿದರೆ ನಿಧಿ ಶೋಧಕ್ಕಾಗಿ ಹೀಗೆ ಮಾಡಿರಬಹುದು ಅನ್ನಿಸುತ್ತದೆ ಎನ್ನುತ್ತಾರೆ ಸ್ಥಳೀಯರು.</p>.<p>ಈ ದೇವಸ್ಥಾನದ ಸುತ್ತಲೂ ತೋಟಗಳಿದ್ದು, ರೈತರು ಹಗಲೂ ರಾತ್ರಿ ಅಲ್ಲಿ ಓಡಾಡುತ್ತಿರುತ್ತಾರೆ. ಸಾಮಾನ್ಯರು ಎತ್ತಲಾರದ ಚಪ್ಪಡಿ ಕಲ್ಲುಗಳನ್ನು ಎತ್ತಿರುವುದನ್ನು ಗಮನಿಸಿದರೆ, ಕೃತ್ಯದಲ್ಲಿ ಬಹಳಷ್ಟು ಜನರು ಇರಬಹುದು ಮತ್ತು ಚೈನ್ ಪುಲ್ಲಿ ಮತ್ತಿತರ ಸಾಮಗ್ರಿ ಬಳಸಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಪರಿಚಿತರೇ ಈ ಕೃತ್ಯ ನಡೆಸಿರಬಹುದು ಎಂಬ ಅನುಮಾನವೂ ಸ್ಥಳೀಯರನ್ನು ಕಾಡುತ್ತಿದೆ.</p>.<p>ಪಿಎಸ್ಐ ಪವನ್ ಕುಮಾರ್, ಧನಂಜಯ ಮತ್ತು ಸಿಬ್ಬಂದಿ ದೇವಸ್ಥಾನಕ್ಕೆ ಗುರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.</p>.<p>ಹೊಯ್ಸಳ ದೊರೆ 1ನೇ ನರಸಿಂಹನ ಕಾಲದಲ್ಲಿ ಸ್ಥಳೀಯ ಆಡಳಿತಾಧಿಕಾರಿ ಕಲಿದೇವ ಈ ದೇವಸ್ಥಾನ ನಿರ್ಮಾಣ ಮಾಡಿರುವ ಬಗ್ಗೆ ಶಾಸನವಿದೆ. ಶಿಥಿಲವಾದ ದೇವಸ್ಥಾನಕ್ಕೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ 10 ವರ್ಷಗಳ ಹಿಂದೆ ಮಂಗಳೂರಿನ ಪುರೋಹಿತರನ್ನು ಕರೆಸಿ ಅಷ್ಟಮಂಗಲ ಪ್ರಶ್ನೆ ನಡೆಸಲಾಗಿತ್ತು. </p>.<blockquote>ಕಂಬದ ಬಳಿ ಸಾಮಗ್ರಿ ಇಟ್ಟು ಪೂಜೆ ಪರಿಚಿತರೇ ಈ ಕೃತ್ಯ ನಡೆಸಿರು ಶಂಕೆ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ದೇವಾಲಯ</blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡೂರು:</strong> ತಾಲ್ಲೂಕಿನ ಎಂ.ಕೋಡಿಹಳ್ಳಿ ಕೆರೆ ಬದಿಯಲ್ಲಿರುವ 1,000 ವರ್ಷ ಹಳೆಯ ಕಲ್ಲೇಶ್ವರ ತ್ರಿಕೂಟ ದೇವಸ್ಥಾನದಲ್ಲಿ ಬುಧವಾರ ರಾತ್ರಿ ನೆಲಹಾಸನ್ನು ಬಗೆದು ಹಾಕಲಾಗಿದೆ. ನಿಧಿಯ ಆಸೆಗಾಗಿ ಈ ಕೆಲಸ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. </p>.<p>ದೇವಸ್ಥಾನಕ್ಕೆ ಮೂರು ಬಾಗಿಲುಗಳಿದ್ದು, ನವರಂಗದಲ್ಲಿ ನಾಟ್ಯ ವೃತ್ತವಿದೆ. ಈ ವೃತ್ತದಲ್ಲಿದ್ದ ಬಸವಣ್ಣ ವಿಗ್ರಹವನ್ನು ಬದಿಗಿರಿಸಿ ಅದರಡಿಯಲ್ಲಿದ್ದ ಸುಮಾರು ಮೂರು ಅಡಿ ದಪ್ಪದ ಕಲ್ಲು ಚಪ್ಪಡಿಯನ್ನು ಚೈನ್ ಉಪಯೋಗಿಸಿ ಮೇಲಕ್ಕೆತ್ತಿ, ಐದು ಅಡಿಗೂ ಹೆಚ್ಚು ಆಳ ಹಾಗೂ ಅಡ್ಡದಲ್ಲಿ ಎಂಟು ಅಡಿಗೂ ಹೆಚ್ಚು ಬಗೆಯಲಾಗಿದೆ.</p>.<p>ನವರಂಗದಲ್ಲಿರುವ ನಾಲ್ಕು ಕಂಬಗಳ ಬಳಿಯೂ ತಾಮ್ರದ ತಗಡು, ಸಣ್ಣ ಮಡಕೆ, ನಿಂಬೆಹಣ್ಣು ಮುಂತಾದವುಗಳನ್ನು ಇಟ್ಟು ಪೂಜೆ ಮಾಡಿರುವುದು ನೋಡಿದರೆ ನಿಧಿ ಶೋಧಕ್ಕಾಗಿ ಹೀಗೆ ಮಾಡಿರಬಹುದು ಅನ್ನಿಸುತ್ತದೆ ಎನ್ನುತ್ತಾರೆ ಸ್ಥಳೀಯರು.</p>.<p>ಈ ದೇವಸ್ಥಾನದ ಸುತ್ತಲೂ ತೋಟಗಳಿದ್ದು, ರೈತರು ಹಗಲೂ ರಾತ್ರಿ ಅಲ್ಲಿ ಓಡಾಡುತ್ತಿರುತ್ತಾರೆ. ಸಾಮಾನ್ಯರು ಎತ್ತಲಾರದ ಚಪ್ಪಡಿ ಕಲ್ಲುಗಳನ್ನು ಎತ್ತಿರುವುದನ್ನು ಗಮನಿಸಿದರೆ, ಕೃತ್ಯದಲ್ಲಿ ಬಹಳಷ್ಟು ಜನರು ಇರಬಹುದು ಮತ್ತು ಚೈನ್ ಪುಲ್ಲಿ ಮತ್ತಿತರ ಸಾಮಗ್ರಿ ಬಳಸಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಪರಿಚಿತರೇ ಈ ಕೃತ್ಯ ನಡೆಸಿರಬಹುದು ಎಂಬ ಅನುಮಾನವೂ ಸ್ಥಳೀಯರನ್ನು ಕಾಡುತ್ತಿದೆ.</p>.<p>ಪಿಎಸ್ಐ ಪವನ್ ಕುಮಾರ್, ಧನಂಜಯ ಮತ್ತು ಸಿಬ್ಬಂದಿ ದೇವಸ್ಥಾನಕ್ಕೆ ಗುರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.</p>.<p>ಹೊಯ್ಸಳ ದೊರೆ 1ನೇ ನರಸಿಂಹನ ಕಾಲದಲ್ಲಿ ಸ್ಥಳೀಯ ಆಡಳಿತಾಧಿಕಾರಿ ಕಲಿದೇವ ಈ ದೇವಸ್ಥಾನ ನಿರ್ಮಾಣ ಮಾಡಿರುವ ಬಗ್ಗೆ ಶಾಸನವಿದೆ. ಶಿಥಿಲವಾದ ದೇವಸ್ಥಾನಕ್ಕೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ 10 ವರ್ಷಗಳ ಹಿಂದೆ ಮಂಗಳೂರಿನ ಪುರೋಹಿತರನ್ನು ಕರೆಸಿ ಅಷ್ಟಮಂಗಲ ಪ್ರಶ್ನೆ ನಡೆಸಲಾಗಿತ್ತು. </p>.<blockquote>ಕಂಬದ ಬಳಿ ಸಾಮಗ್ರಿ ಇಟ್ಟು ಪೂಜೆ ಪರಿಚಿತರೇ ಈ ಕೃತ್ಯ ನಡೆಸಿರು ಶಂಕೆ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ದೇವಾಲಯ</blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>