ಕಳೆದೊಂದು ತಿಂಗಳ ಹಿಂದೆ ಭದ್ರಾ ಹಿನ್ನೀರಿನ ವ್ಯಾಪ್ತಿಯಲ್ಲಿ ದೆಹಲಿ ಮೂಲದ ಕಂಪೆನಿಯೊಂದು ಸರ್ವೆ ಕಾರ್ಯ ನಡೆಸಿತ್ತು. ಆ ಸಂದರ್ಭದಲ್ಲಿ ಪ್ರಜಾವಾಣಿ ಸಂಬಂಧಪಟ್ಟ ಕಂಪೆನಿ ಸಂಪರ್ಕಿಸಿದಾಗ ಹಿಂದೆ ಎಷ್ಟು ಪ್ರಮಾಣದಲ್ಲಿ ಹಿನ್ನೀರು ನಿಲ್ಲುತ್ತಿತ್ತು, ಎಷ್ಟು ಪ್ರಮಾಣದಲ್ಲಿ ಹೂಳು ತುಂಬಿ ಕೊಂಡಿದೆ ಎಂಬ ಬಗ್ಗೆ ಸಮೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದ್ದರು. ಆದರೆ ಪ್ರಸ್ತುತ ಪುನ: ಹಲವು ಗ್ರಾಮಗಳಲ್ಲಿ ಭದ್ರಾಅಣೆಕಟ್ಟನ್ನು ಎತ್ತರಿಸುತ್ತಾರೆ ಎಂಬ ವದಂತಿ ವ್ಯಾಪಕವಾಗಿ ಹಬ್ಬಿದೆ.