‘ಶಾಸಕನಾಗಿ ಈ ಕ್ಷೇತ್ರಕ್ಕೆ ನನ್ನ ಕೊಡುಗೆ ಶೂನ್ಯ ಎನ್ನುವವರು ಈ ಕಾಮಗಾರಿಗಳನ್ನು ಗಮನಿಸಬೇಕು. ಟೀಕೆ ಮಾಡುವುದನ್ನೇ ನಿತ್ಯ ಕಾಯಕವನ್ನಾಗಿ ಮಾಡಿಕೊಂಡಿರುವವರಿಗೆ ಪ್ರತಿಕ್ರಿಯಿ ಸಲು ಹೋಗುವುದಿಲ್ಲ. ನನ್ನ ದೃಷ್ಟಿ ಯಾವಾಗಲೂ ಕ್ಷೇತ್ರದ ಅಭಿವೃದ್ದಿಯ ಕಡೆಗೆ ಇರುತ್ತದೆ’ ಎಂದು ಅವರು ಹೇಳಿದರು. ತಾಲ್ಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಉಪಾಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ, ಸಿಗೇಹಡ್ಲುಹರೀಶ್ ಮತ್ತಿತರರು ಉಪಸ್ಥಿತರಿದ್ದರು.