<p><strong>ಚಿಕ್ಕಮಗಳೂರು:</strong> ತುತ್ತು ಕೂಳಿಗಾಗಿ ಹಗಲು ರಾತ್ರಿ ಶ್ರಮಿಸುವ ಕಾರ್ಮಿಕ ಮತ್ತು ರೈತ ದೇಶದ ಆಧಾರ ಸ್ಥಂಭ ಎಂದು ಶಾಸಕ ಸಿ.ಟಿ.ರವಿ ಹೇಳಿದರು.<br /> <br /> ನಗರದ ಟಿಎಪಿಸಿಎಂಎಸ್ ಮುಂಭಾಗದಲ್ಲಿರುವ ಅವರಣದಲ್ಲಿ ಹಮಾಲಿ ಕಾರ್ಮಿಕರ ಸಂಘ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಮವಸ್ತ್ರ ಮತ್ತು ಗುರುತಿನ ಚೀಟಿ ವಿತರಿಸಿ ಅವರು ಮಾತನಾಡಿದರು.<br /> <br /> ಯಾವುದೇ ಗೋಪುರ ಉಳಿಯಲು ಅಡಿಪಾಯ ಅಗತ್ಯ. ಕೆಲಸ ಮಾಡುವವರ ಕೊರತೆ ಹೆಚ್ಚಿದ್ದರೂ ಕಾಲದ ವ್ಯವಸ್ಥೆಯಲ್ಲಿ ಕೆಲಸ ಮಾಡುವವರಿಗೆ ಸಿಗುವ ಗೌರವ ಸಿಗುತ್ತಿಲ್ಲ ಎಂದು ಅವರು ವಿಷಾದಿಸಿದರು. <br /> <br /> ನಗರದಲ್ಲಿ ಈಗಾಗಲೇ 60 ಕಾರ್ಮಿಕರಿಗೆ ನಿವೇಶನ ನೀಡಲಾಗಿದೆ. ದಾಖಲೆ ಒದಗಿಸುವವರಿಗೆ ನಿವೇಶನ ನೀಡಿ ಮನೆ ಒದಗಿಸುತ್ತೇವೆ. ಟೆಂಡರ್ ಚಿಕನ್ ಪಕ್ಕದಲ್ಲಿ ಹಮಾಲಿ ಕಾರ್ಮಿಕರ ಸಂಘಕ್ಕೆ ನಿವೇಶನ ಒದಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.<br /> <br /> ಸಂಘದ ಕಾರ್ಯದರ್ಶಿ ಎಸ್.ಎನ್.ಮಂಜುನಾಥ್ ಮಾತನಾಡಿ, ಇಂದು 200 ಜನ ಕಾರ್ಮಿಕರಿಗೂ ಸಮವಸ್ತ್ರ ಮತ್ತು ಗುರುತಿನ ಕಾರ್ಡನ್ನು ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ 50 ಜನ ಕಾರ್ಮಿಕರಿಗೆ ಇದನ್ನು ನೀಡಲಾಗುತ್ತದೆ. ಎಲ್ಲ ಸದಸ್ಯರಿಗೂ ಜೀವ ವಿಮಾ ಸೌಲಭ್ಯ ಒದಗಿಸಲಾಗಿದೆ ಎಂದರು.<br /> <br /> ಸಿಪಿಐನ ಬಿ.ಅಮ್ಜದ್ ಮಾತನಾಡಿ, ಬಡವರ ಬಗ್ಗೆ ದನಿಯೆತ್ತುವ ಕಳಕಳಿ ಶಾಸಕ ಸಿ.ಟಿ.ರವಿಯವರಿಗಿದೆ ಎಂದರು.ನಗರಸಭೆ ಅಧ್ಯಕ್ಷ ನಿಂಗೇಗೌಡ, ಸದಸ್ಯ ಎಚ್.ಡಿ.ತಮ್ಮಯ್ಯ, ನಾಮಿನಿ ಸದಸ್ಯ ಮುತ್ತಯ್ಯ, ಅಧ್ಯಕ್ಷ ಮಹಮದ್ ಆಲಿ, ಉಪಾಧ್ಯಕ್ಷ ರಹೀಂಖಾನ್, ಸಹ ಕಾರ್ಯದರ್ಶಿ ನದೀಂ, ಖಜಾಂಚಿ ಅಜ್ಜಯ್ಯ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು:</strong> ತುತ್ತು ಕೂಳಿಗಾಗಿ ಹಗಲು ರಾತ್ರಿ ಶ್ರಮಿಸುವ ಕಾರ್ಮಿಕ ಮತ್ತು ರೈತ ದೇಶದ ಆಧಾರ ಸ್ಥಂಭ ಎಂದು ಶಾಸಕ ಸಿ.ಟಿ.ರವಿ ಹೇಳಿದರು.<br /> <br /> ನಗರದ ಟಿಎಪಿಸಿಎಂಎಸ್ ಮುಂಭಾಗದಲ್ಲಿರುವ ಅವರಣದಲ್ಲಿ ಹಮಾಲಿ ಕಾರ್ಮಿಕರ ಸಂಘ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಮವಸ್ತ್ರ ಮತ್ತು ಗುರುತಿನ ಚೀಟಿ ವಿತರಿಸಿ ಅವರು ಮಾತನಾಡಿದರು.<br /> <br /> ಯಾವುದೇ ಗೋಪುರ ಉಳಿಯಲು ಅಡಿಪಾಯ ಅಗತ್ಯ. ಕೆಲಸ ಮಾಡುವವರ ಕೊರತೆ ಹೆಚ್ಚಿದ್ದರೂ ಕಾಲದ ವ್ಯವಸ್ಥೆಯಲ್ಲಿ ಕೆಲಸ ಮಾಡುವವರಿಗೆ ಸಿಗುವ ಗೌರವ ಸಿಗುತ್ತಿಲ್ಲ ಎಂದು ಅವರು ವಿಷಾದಿಸಿದರು. <br /> <br /> ನಗರದಲ್ಲಿ ಈಗಾಗಲೇ 60 ಕಾರ್ಮಿಕರಿಗೆ ನಿವೇಶನ ನೀಡಲಾಗಿದೆ. ದಾಖಲೆ ಒದಗಿಸುವವರಿಗೆ ನಿವೇಶನ ನೀಡಿ ಮನೆ ಒದಗಿಸುತ್ತೇವೆ. ಟೆಂಡರ್ ಚಿಕನ್ ಪಕ್ಕದಲ್ಲಿ ಹಮಾಲಿ ಕಾರ್ಮಿಕರ ಸಂಘಕ್ಕೆ ನಿವೇಶನ ಒದಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.<br /> <br /> ಸಂಘದ ಕಾರ್ಯದರ್ಶಿ ಎಸ್.ಎನ್.ಮಂಜುನಾಥ್ ಮಾತನಾಡಿ, ಇಂದು 200 ಜನ ಕಾರ್ಮಿಕರಿಗೂ ಸಮವಸ್ತ್ರ ಮತ್ತು ಗುರುತಿನ ಕಾರ್ಡನ್ನು ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ 50 ಜನ ಕಾರ್ಮಿಕರಿಗೆ ಇದನ್ನು ನೀಡಲಾಗುತ್ತದೆ. ಎಲ್ಲ ಸದಸ್ಯರಿಗೂ ಜೀವ ವಿಮಾ ಸೌಲಭ್ಯ ಒದಗಿಸಲಾಗಿದೆ ಎಂದರು.<br /> <br /> ಸಿಪಿಐನ ಬಿ.ಅಮ್ಜದ್ ಮಾತನಾಡಿ, ಬಡವರ ಬಗ್ಗೆ ದನಿಯೆತ್ತುವ ಕಳಕಳಿ ಶಾಸಕ ಸಿ.ಟಿ.ರವಿಯವರಿಗಿದೆ ಎಂದರು.ನಗರಸಭೆ ಅಧ್ಯಕ್ಷ ನಿಂಗೇಗೌಡ, ಸದಸ್ಯ ಎಚ್.ಡಿ.ತಮ್ಮಯ್ಯ, ನಾಮಿನಿ ಸದಸ್ಯ ಮುತ್ತಯ್ಯ, ಅಧ್ಯಕ್ಷ ಮಹಮದ್ ಆಲಿ, ಉಪಾಧ್ಯಕ್ಷ ರಹೀಂಖಾನ್, ಸಹ ಕಾರ್ಯದರ್ಶಿ ನದೀಂ, ಖಜಾಂಚಿ ಅಜ್ಜಯ್ಯ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>