ಆಹಾರ ಇಲಾಖೆ ಉಪನಿರ್ದೇಶಕ ಮುನಿಸ್ವಾಮಿ ಮಾತನಾಡಿ, ‘ಪಡಿತರ ಟೋಕನ್ ವಿತರಿಸಲು 10 ಅಂಗಡಿಗಳಿಗೆ ಅನುಮತಿ ನೀಡಲಾಗಿದೆ. ಪಡಿತರ ವಿತರಿಸಲು ಇದೇ 31ರ ವರೆಗೆ ಸಮಯವಿದೆ. ಟೋಕನ್ ವಿತರಿಸಲು ಹೆಚ್ಚಿನ ಅಂಗಡಿಗಳಿಗೆ ಅನುಮತಿ ನೀಡಲಾಗುವುದು. ಗುರುವಾರ ಸರ್ವರ್ ಡೌನ್ ಆಗಿದ್ದರಿಂದ ಸಮಸ್ಯೆಯಾಗಿದೆ’ ಎಂದರು. ನಗರಸಭೆ ಸದಸ್ಯ ರವೀಂದ್ರ ಪ್ರಭು, ಜಯಕರ್ನಾಟಕ ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಜಿಲ್ಲಾಧ್ಯಕ್ಷ ನೂರುಲ್ಲಾಖಾನ್ ಇದ್ದರು.