<p>ಚಿಕ್ಕಮಗಳೂರು: ಮಕ್ಕಳಿಗೆ ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆಯ ಅಭಿಮಾನ, ಪ್ರೀತಿ ಮೂಡಿಸುವ ಶಿಕ್ಷಣ ನೀಡುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರ ಮೂರ್ತಿ ಅಭಿಪ್ರಾಯಪಟ್ಟರು.<br /> <br /> ತಾಲ್ಲೂಕಿನ ಆಣೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.<br /> <br /> ಮೂರು ಶತಮಾನಗಳ ಹಿಂದೆಯೇ ನಮ್ಮ ದೇಶಕ್ಕೆ ಭೇಟಿ ನೀಡಿದ್ದ ಪ್ರವಾಸಿಗರು ಭಾರತದಲ್ಲಿ ಅಪಾರ ವಿದ್ಯಾವಂತರಿದ್ದಾರೆ ಎಂದಿದ್ದರು. ವೇದಗಳಲ್ಲಿ ವಿಮಾನ ತಯಾರಿಸುವುದು ಹೇಗೆ ಎಂಬುದನ್ನು ಬರೆಯಲಾಗಿದೆ. <br /> <br /> ವಿಮಾನ ಕಂಡು ಹಿಡಿದವರು ರೈಟ್ ಬ್ರದರ್ಸ್ ಎನ್ನಲಾಗುತ್ತಿದೆ. ಆದರೆ 4 ಸಾವಿರ ವರ್ಷಗಳ ಮೊದಲೇ ಅಗಡಿ ಎಂಬ ಕನ್ನಡಿಗ ಅದನ್ನು ಕಂಡು ಹಿಡಿದಿದ್ದರು ಎಂದರು.<br /> <br /> 50 ವರ್ಷಗಳ ಹಿಂದೆ ಗ್ರಾಮಸ್ಥರ ಶ್ರಮದಾನದಿಂದ ಆರಂಭಗೊಂಡ ಶಾಲೆಯಲ್ಲಿ ಈವರೆಗೆ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾ ಡಿದ್ದು, ಅವರಲ್ಲಿ ನೂರಾರು ಮಂದಿ ಉನ್ನತ ಹುದ್ದೆಯಲ್ಲಿದ್ದಾರೆ ಎಂದು ಗ್ರಾಮಸ್ಥ ಎ.ಟಿ.ರಮೇಶ್ ತಿಳಿಸಿದರು.<br /> <br /> ಗ್ರಾಮದ ಮುಖಂಡ ಎಚ್.ಡಿ.ರಾಮೇಗೌಡ ಶಾಲೆ ನಡೆದು ಬಂದ ಹಾದಿ ವಿವರಿಸಿದರು. ಸಮಾರಂಭಕ್ಕೆ ಮೊದಲು ಶಾಲೆಯ ಹಳೇ ವಿದ್ಯಾರ್ಥಿಗಳು ಮತ್ತು ಪೋಷಕರ ಕ್ರೀಡಾಕೂಟವನ್ನು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಉದ್ಘಾಟಿಸಿದರು. <br /> <br /> ತಹಸೀಲ್ದಾರ್ ವೀಣಾ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ.ನಾಗೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವರಾಜ್, ಶಿಕ್ಷಣಾಧಿಕಾರಿ ದೊಡ್ಡಮಲ್ಲಪ್ಪ, ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ ಗಂಗಾಧರ್, ಗ್ರಾಮದ ಹಿರಿಯರಾದ ಅತ್ತಿಕಟ್ಟೆ ಜಗನ್ನಾಥ್, ಎಚ್.ಎಂ.ನಿಂಗೇಗೌಡ, ಎಚ್.ಬಿ.ಗಿಡ್ಡೇಗೌಡ, ಜಿ.ಎನ್.ರಮೇಶ್, ಪ್ರಭಾರ ಮುಖ್ಯ ಶಿಕ್ಷಕ ಸೋಮಶೇಖರ್, ಶಿಕ್ಷಕರಾದ ರಂಗಸ್ವಾಮಿ, ಬಸವೇಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕಮಗಳೂರು: ಮಕ್ಕಳಿಗೆ ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆಯ ಅಭಿಮಾನ, ಪ್ರೀತಿ ಮೂಡಿಸುವ ಶಿಕ್ಷಣ ನೀಡುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರ ಮೂರ್ತಿ ಅಭಿಪ್ರಾಯಪಟ್ಟರು.<br /> <br /> ತಾಲ್ಲೂಕಿನ ಆಣೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.<br /> <br /> ಮೂರು ಶತಮಾನಗಳ ಹಿಂದೆಯೇ ನಮ್ಮ ದೇಶಕ್ಕೆ ಭೇಟಿ ನೀಡಿದ್ದ ಪ್ರವಾಸಿಗರು ಭಾರತದಲ್ಲಿ ಅಪಾರ ವಿದ್ಯಾವಂತರಿದ್ದಾರೆ ಎಂದಿದ್ದರು. ವೇದಗಳಲ್ಲಿ ವಿಮಾನ ತಯಾರಿಸುವುದು ಹೇಗೆ ಎಂಬುದನ್ನು ಬರೆಯಲಾಗಿದೆ. <br /> <br /> ವಿಮಾನ ಕಂಡು ಹಿಡಿದವರು ರೈಟ್ ಬ್ರದರ್ಸ್ ಎನ್ನಲಾಗುತ್ತಿದೆ. ಆದರೆ 4 ಸಾವಿರ ವರ್ಷಗಳ ಮೊದಲೇ ಅಗಡಿ ಎಂಬ ಕನ್ನಡಿಗ ಅದನ್ನು ಕಂಡು ಹಿಡಿದಿದ್ದರು ಎಂದರು.<br /> <br /> 50 ವರ್ಷಗಳ ಹಿಂದೆ ಗ್ರಾಮಸ್ಥರ ಶ್ರಮದಾನದಿಂದ ಆರಂಭಗೊಂಡ ಶಾಲೆಯಲ್ಲಿ ಈವರೆಗೆ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾ ಡಿದ್ದು, ಅವರಲ್ಲಿ ನೂರಾರು ಮಂದಿ ಉನ್ನತ ಹುದ್ದೆಯಲ್ಲಿದ್ದಾರೆ ಎಂದು ಗ್ರಾಮಸ್ಥ ಎ.ಟಿ.ರಮೇಶ್ ತಿಳಿಸಿದರು.<br /> <br /> ಗ್ರಾಮದ ಮುಖಂಡ ಎಚ್.ಡಿ.ರಾಮೇಗೌಡ ಶಾಲೆ ನಡೆದು ಬಂದ ಹಾದಿ ವಿವರಿಸಿದರು. ಸಮಾರಂಭಕ್ಕೆ ಮೊದಲು ಶಾಲೆಯ ಹಳೇ ವಿದ್ಯಾರ್ಥಿಗಳು ಮತ್ತು ಪೋಷಕರ ಕ್ರೀಡಾಕೂಟವನ್ನು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಉದ್ಘಾಟಿಸಿದರು. <br /> <br /> ತಹಸೀಲ್ದಾರ್ ವೀಣಾ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ.ನಾಗೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವರಾಜ್, ಶಿಕ್ಷಣಾಧಿಕಾರಿ ದೊಡ್ಡಮಲ್ಲಪ್ಪ, ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ ಗಂಗಾಧರ್, ಗ್ರಾಮದ ಹಿರಿಯರಾದ ಅತ್ತಿಕಟ್ಟೆ ಜಗನ್ನಾಥ್, ಎಚ್.ಎಂ.ನಿಂಗೇಗೌಡ, ಎಚ್.ಬಿ.ಗಿಡ್ಡೇಗೌಡ, ಜಿ.ಎನ್.ರಮೇಶ್, ಪ್ರಭಾರ ಮುಖ್ಯ ಶಿಕ್ಷಕ ಸೋಮಶೇಖರ್, ಶಿಕ್ಷಕರಾದ ರಂಗಸ್ವಾಮಿ, ಬಸವೇಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>