ಇದೀಗ ಸುರೇಶ್ ಜಟಗೇಶ್ವರ ಪ್ರಕರಣದಲ್ಲೂ ಸಹ ಸಂಚು ರೂಪಿಸಿ ಅ. 5ರಂದು ಅತ್ಯಾಚಾರ ನಡೆದಿದೆ ಎಂದು ಬಾಲಕಿಯಿಂದ ದೂರು ಕೊಡಿಸಿದ್ದು, ಇದರಲ್ಲಿ ಕಾಂಗ್ರೆಸ್ನ ಭಾಸ್ಕರ ನಾಯ್ಕ ಅವರ ಕೈವಾಡವಿದೆ ಎಂದು ಆರೋಪಿ ಸಿದರು. ಇದೇ ಸಂದರ್ಭದಲ್ಲಿ ಈ ಸುಳ್ಳು ಪ್ರಕರಣವನ್ನು ಸರ್ಕಾರ ಕೈಬಿಟ್ಟು, ಪೊಲೀಸರಿಗೆ ಬಿ ರಿಪೋರ್ಟ್ ಸಲ್ಲಿಸುವಂತೆ ಆದೇಶಿಸಬೇಕೆಂದು ಒತ್ತಾಯಿಸಿ ಸ್ಥಳಕ್ಕೆ ಆಗಮಿಸಿದ ಪ್ರಭಾರಿ ತಹಶೀಲ್ದಾರ್ ಶೇರಿಗಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಮುಖಂಡ ಎ.ಎಸ್. ನಯನ, ಜಿಲ್ಲಾಪಂಚಾಯತಿ ಸದಸ್ಯ ಎಂ.ಎಸ್. ರಂಗನಾಥ್, ನೂತನ್ ಕುಮಾರ್, ಅರುಣ್ ಕುಮಾರ್, ನಾಗೇಶ್ ಕಾಮತ್, ಶಿವಶಂಕರ್, ಅಮಿತಾ ಸತ್ಯನಾರಾಯಣ್, ಗಿರಿಜಾ ಲಕ್ಷ್ಮೀ ಮತ್ತಿತರರು ಇದ್ದರು.
ಪ್ರತಿಭಟನಾ ಸಭೆಗೂ ಮೊದಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಕ್ಷದ ಕಾರ್ಯಕರ್ತರು ಸುರೇಶ್ ಜಟ ಗೇಶ್ವರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಖಂಡಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು.