<p><strong>ಮೂಡಿಗೆರೆ:</strong> ತಾಲ್ಲೂಕಿನ ಗೌಡಳ್ಳಿ ಹೊರಟ್ಟಿಯಲ್ಲಿರುವ ಸೇತುವೆಯು ಕುಸಿದಿದ್ದು, ಈ ಭಾಗದ 10ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ತಾಲ್ಲೂಕಿನಿಂದ ಗೌಡಳ್ಳಿ ಹೊರಟ್ಟಿಯ ಮೂಲಕ ಹೊಸಳ್ಳಿ, ಮೇಕನಗದ್ದೆಗೆ ಸಂಪರ್ಕ ಕಲ್ಪಿಸುವ ಈ ಸೇತುವೆಯನ್ನು 5 ದಶಕಗಳಿಗೂ ಹಿಂದೆ ನಿರ್ಮಿಸಿದ್ದು, ನಾಲ್ಕು ವರ್ಷಗಳ ಹಿಂದೆ ಸುರಿದಿದ್ದ ಮಳೆಗೆ ಗುಂಡಿ ಕಾಣಿಸಿಕೊಂಡಿತ್ತು. 4ವರ್ಷಗಳಿಂದಲೂ ಸೇತುವೆ ದುರಸ್ತಿಗೊಳಿಸುವಂತೆ ಗ್ರಾಮ ಸ್ಥರು ಒತ್ತಾಯಿಸಿದರೂ, ಇಲಾಖೆ ಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ.</p>.<p>ಇದೀಗ ಸೇತುವೆಯ ಒಂದು ಭಾಗ ಸಂಪೂರ್ಣ ಕುಸಿದಿದ್ದು, ಮತ್ತೊಂದು ಭಾಗ ತುಂಡಾಗುವ ಹಂತಕ್ಕೆ ತಲುಪಿದ್ದು, ಸೇತುವೆಯ ಮೇಲೆ ತಿರುಗಾಡಲೂ ಆಗದಂತಾಗಿದೆ. ಇದರಿಂದಾಗಿ ವಾಹನಗಳು ಸಹ ಸಂಚರಿಸಲಾಗದ ಸ್ಥಿತಿ ಉಂಟಾಗಿದ್ದು, ವಿದ್ಯಾರ್ಥಿಗಳು, ಕಾರ್ಮಿಕರು ಗ್ರಾಮದಿಂದ ಹೊರಹೋಗಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.</p>.<p>ಸೇತುವೆ ಕುಸಿತವಾಗಿರುವುದರಿಂದ, ಹೊರಟ್ಟಿ, ಅಕ್ಕಿರುದ್ದಿ, ಮೇಕನಗದ್ದೆ, ಮರಗುಂದ, ಬಕ್ಕಡಿ, ಹೊಸಳ್ಳಿ, ಕೊಗ್ರಿ ಸೇರಿದಂತೆ 10 ಕ್ಕೂ ಅಧಿಕ ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದ್ದು, ಜನಜೀವನ ಸಂಕಷ್ಟಕ್ಕೆ ಸಿಲುಕಿದೆ.</p>.<p>ತಾಲ್ಲೂಕು ಕೇಂದ್ರದಿಂದ ಈ ಮಾರ್ಗದಲ್ಲಿ ಮುಂಜಾನೆ 2, ಮಧ್ಯಾಹ್ನ 1 ಹಾಗೂ ರಾತ್ರಿ 2 ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಸಂಚಾರ ನಡೆಸುತ್ತಿದ್ದು, ಇದೀಗ ಸೇತುವೆ ತುಂಡಾಗಿರುವುದರಿಂದ, ಈ ಗ್ರಾಮದಗಳಿಗೆ ಬಸ್ ಸಂಚಾರವನ್ನು ಸಂಪೂರ್ಣವಾಗಿ ತಡೆಹಿಡಿಯಲಾಗಿದೆ. ಈ ಮಾರ್ಗದ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಮಾರ್ಗವನ್ನು ಬದಲಾಯಿಸಿ ಚಲಾಯಿಸುತ್ತಿದ್ದು, ಸ್ಥಳೀಯ ಜನರು ಪರದಾಡುತ್ತಿದ್ದಾರೆ.</p>.<p>ಈ ಭಾಗದ ಜನರಿಗೆ ಮಂಗಳವಾರ ಬಿಳ್ಳೂರು ಗ್ರಾಮದಲ್ಲಿ ನಡೆಯುವ ವಾರದ ಸಂತೆಯು, ದಿನಸಿ ವಸ್ತುಗಳನ್ನು ಖರೀದಿಸುವ ಪ್ರಧಾನ ಕೇಂದ್ರವಾಗಿದ್ದು, ಎರಡು ದಿನಗಳ ಹಿಂದೆ ಕುಸಿದಿರುವ ಸೇತುವೆಯಿಂದ ದಿನಸಿಗಳನ್ನು ಕೊಳ್ಳ ಲಾಗದ ಸ್ಥಿತಿ ಉಂಟಾಗಿದೆ.</p>.<p>ಗ್ರಾಮೀಣ ರಸ್ತೆಗಳ ಪಟ್ಟಿ ಯಲ್ಲಿರುವ ಈ ಸೇತುವೆಯನ್ನು ದುರಸ್ತಿ ಗೊಳಿಸುವಂತೆ ಅನೇಕ ಬಾರಿ ಮನವಿ ಮಾಡಿದ್ದರೂ, ಯಾವುದೇ ಕ್ರಮ ಕೈಗೊಳ್ಳದೇ, ಗ್ರಾಮೀಣ ಜನರು ಸಂಕಷ್ಟ ಎದುರಿಸುವಂತಾಗಿದ್ದು, ಜಿಲ್ಲಾಡಳಿತವು ಕೂಡಲೇ ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು. ಸೇತುವೆ ನಿರ್ಮಾಣದವರೆಗೂ ತಾತ್ಕಲಿಕ ರಸ್ತೆಯನ್ನು ನಿರ್ಮಿಸಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡಿಗೆರೆ:</strong> ತಾಲ್ಲೂಕಿನ ಗೌಡಳ್ಳಿ ಹೊರಟ್ಟಿಯಲ್ಲಿರುವ ಸೇತುವೆಯು ಕುಸಿದಿದ್ದು, ಈ ಭಾಗದ 10ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ತಾಲ್ಲೂಕಿನಿಂದ ಗೌಡಳ್ಳಿ ಹೊರಟ್ಟಿಯ ಮೂಲಕ ಹೊಸಳ್ಳಿ, ಮೇಕನಗದ್ದೆಗೆ ಸಂಪರ್ಕ ಕಲ್ಪಿಸುವ ಈ ಸೇತುವೆಯನ್ನು 5 ದಶಕಗಳಿಗೂ ಹಿಂದೆ ನಿರ್ಮಿಸಿದ್ದು, ನಾಲ್ಕು ವರ್ಷಗಳ ಹಿಂದೆ ಸುರಿದಿದ್ದ ಮಳೆಗೆ ಗುಂಡಿ ಕಾಣಿಸಿಕೊಂಡಿತ್ತು. 4ವರ್ಷಗಳಿಂದಲೂ ಸೇತುವೆ ದುರಸ್ತಿಗೊಳಿಸುವಂತೆ ಗ್ರಾಮ ಸ್ಥರು ಒತ್ತಾಯಿಸಿದರೂ, ಇಲಾಖೆ ಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ.</p>.<p>ಇದೀಗ ಸೇತುವೆಯ ಒಂದು ಭಾಗ ಸಂಪೂರ್ಣ ಕುಸಿದಿದ್ದು, ಮತ್ತೊಂದು ಭಾಗ ತುಂಡಾಗುವ ಹಂತಕ್ಕೆ ತಲುಪಿದ್ದು, ಸೇತುವೆಯ ಮೇಲೆ ತಿರುಗಾಡಲೂ ಆಗದಂತಾಗಿದೆ. ಇದರಿಂದಾಗಿ ವಾಹನಗಳು ಸಹ ಸಂಚರಿಸಲಾಗದ ಸ್ಥಿತಿ ಉಂಟಾಗಿದ್ದು, ವಿದ್ಯಾರ್ಥಿಗಳು, ಕಾರ್ಮಿಕರು ಗ್ರಾಮದಿಂದ ಹೊರಹೋಗಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.</p>.<p>ಸೇತುವೆ ಕುಸಿತವಾಗಿರುವುದರಿಂದ, ಹೊರಟ್ಟಿ, ಅಕ್ಕಿರುದ್ದಿ, ಮೇಕನಗದ್ದೆ, ಮರಗುಂದ, ಬಕ್ಕಡಿ, ಹೊಸಳ್ಳಿ, ಕೊಗ್ರಿ ಸೇರಿದಂತೆ 10 ಕ್ಕೂ ಅಧಿಕ ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದ್ದು, ಜನಜೀವನ ಸಂಕಷ್ಟಕ್ಕೆ ಸಿಲುಕಿದೆ.</p>.<p>ತಾಲ್ಲೂಕು ಕೇಂದ್ರದಿಂದ ಈ ಮಾರ್ಗದಲ್ಲಿ ಮುಂಜಾನೆ 2, ಮಧ್ಯಾಹ್ನ 1 ಹಾಗೂ ರಾತ್ರಿ 2 ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಸಂಚಾರ ನಡೆಸುತ್ತಿದ್ದು, ಇದೀಗ ಸೇತುವೆ ತುಂಡಾಗಿರುವುದರಿಂದ, ಈ ಗ್ರಾಮದಗಳಿಗೆ ಬಸ್ ಸಂಚಾರವನ್ನು ಸಂಪೂರ್ಣವಾಗಿ ತಡೆಹಿಡಿಯಲಾಗಿದೆ. ಈ ಮಾರ್ಗದ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಮಾರ್ಗವನ್ನು ಬದಲಾಯಿಸಿ ಚಲಾಯಿಸುತ್ತಿದ್ದು, ಸ್ಥಳೀಯ ಜನರು ಪರದಾಡುತ್ತಿದ್ದಾರೆ.</p>.<p>ಈ ಭಾಗದ ಜನರಿಗೆ ಮಂಗಳವಾರ ಬಿಳ್ಳೂರು ಗ್ರಾಮದಲ್ಲಿ ನಡೆಯುವ ವಾರದ ಸಂತೆಯು, ದಿನಸಿ ವಸ್ತುಗಳನ್ನು ಖರೀದಿಸುವ ಪ್ರಧಾನ ಕೇಂದ್ರವಾಗಿದ್ದು, ಎರಡು ದಿನಗಳ ಹಿಂದೆ ಕುಸಿದಿರುವ ಸೇತುವೆಯಿಂದ ದಿನಸಿಗಳನ್ನು ಕೊಳ್ಳ ಲಾಗದ ಸ್ಥಿತಿ ಉಂಟಾಗಿದೆ.</p>.<p>ಗ್ರಾಮೀಣ ರಸ್ತೆಗಳ ಪಟ್ಟಿ ಯಲ್ಲಿರುವ ಈ ಸೇತುವೆಯನ್ನು ದುರಸ್ತಿ ಗೊಳಿಸುವಂತೆ ಅನೇಕ ಬಾರಿ ಮನವಿ ಮಾಡಿದ್ದರೂ, ಯಾವುದೇ ಕ್ರಮ ಕೈಗೊಳ್ಳದೇ, ಗ್ರಾಮೀಣ ಜನರು ಸಂಕಷ್ಟ ಎದುರಿಸುವಂತಾಗಿದ್ದು, ಜಿಲ್ಲಾಡಳಿತವು ಕೂಡಲೇ ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು. ಸೇತುವೆ ನಿರ್ಮಾಣದವರೆಗೂ ತಾತ್ಕಲಿಕ ರಸ್ತೆಯನ್ನು ನಿರ್ಮಿಸಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>