ಹೊಳಲ್ಕೆರೆ ರಸ್ತೆ ಹಾಗೂ ಜೆಎಂಐಟಿ ಮುಂಭಾಗದಲ್ಲಿ ಮಂಜುನಾಥ್ ಎಂಬುವರು ಬೇಕರಿ ನಡೆಸುತ್ತಿದ್ದಾರೆ. ಈ ಬೇಕರಿ ಮೇಲೆ ದಾಳಿ ನಡೆಸಿದ ತುಳಸಿ ರಂಗನಾಥ್ ಆಹಾರ ಸುರಕ್ಷತಾ ನಿಯಮದಡಿ ಪರವಾನಗಿ ಪಡೆದಿಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಂಡದ ರೂಪದಲ್ಲಿ ₹ 80 ಸಾವಿರ ಪಾವಿತಿಸಿ ಪರವಾನಗಿ ಪಡೆಯುವಂತೆ ತಾಕೀತು ಮಾಡಿದ್ದರು ಎಂದು ಎಸಿಬಿ ಪೊಲೀಸರು ತಿಳಿಸಿದ್ದಾರೆ.