ಸಾಣೇಹಳ್ಳಿ (ಹೊಸದುರ್ಗ): ‘ಬಸವಣ್ಣನವರ ಬದುಕಿನ ಸಾರ ಸರ್ವಸ್ವ ವಚನಗಳು. ಅವುಗಳ ಅಧ್ಯಯನ, ಅನುಷ್ಠಾನಕ್ಕಿಂತ ಇಂದು ಅವರ ಮೂರ್ತಿ ಪ್ರತಿಷ್ಠಾಪಿ ಸುವಲ್ಲಿ ಸ್ಪರ್ಧೆ ನಡೆದಿದೆ. ಸ್ಥಾವರ ಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಎಂದ ಬಸವಣ್ಣನವರ ವಿಚಾರಗಳನ್ನೇ ಸ್ಥಾವರಗೊಳಿಸಿ ಅವರ ಮೂರ್ತಿಯನ್ನು ಜಂಗಮ ಗೊಳಿಸುವ ಕಾರ್ಯ ನಡೆಯುತ್ತಿದೆ. ಇದು ಅವರಿಗೆ ಬಗೆಯುವ ದ್ರೋಹ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.