‘ಸಾಹಿತ್ಯ ಕ್ಷೇತ್ರಕ್ಕೆ ಚಂಪಾ ಅವರು ನೀಡಿದ ಕೊಡುಗೆ ಅನನ್ಯ. ಕನ್ನಡ ಕಟ್ಟುವ ಕೆಲಸದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದಾರೆ. ವೈಚಾರಿಕತೆಗೆ ಒತ್ತಾಸೆಯಾಗಿ ನಿಂತು ಚಳವಳಿ ರೂಪಿಸಿದ್ದಾರೆ. ಹಾಸ್ಯ, ವಿಡಂಬನೆ, ನೇರ– ನಿಷ್ಠುರ ನಡೆಗೆ ಮಾದರಿಯಾಗಿದ್ದಾರೆ. 2018ನೇ ಸಾಲಿನ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಿದ್ದು ಮಠಕ್ಕೂ ಸಂತಸ ತಂದಿದೆ’ ಎಂದು ಶಿವಮೂರ್ತಿ ಮುರುಘಾ ಶರಣರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.