‘ಜಿಲ್ಲೆಯ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಆದ್ಯತೆ ಮೇಲೆ ಕೃಷಿ ಸಾಲ ನೀಡಲಾಗುವುದು. 2020-21ನೇ ಸಾಲಿನಲ್ಲಿ ರೈತರಿಗೆ ₹250 ಕೋಟಿ ಬೆಳೆಸಾಲ ಮತ್ತು ₹50 ಕೋಟಿ ಭೂ ಅಭಿವೃದ್ಧಿ ಸಾಲ ನೀಡಲು ಗುರಿ ಹಾಕಿಕೊಳ್ಳಲಾಗಿದೆ. ಕೋವಿಡ್ ಕಾರಣಕ್ಕೆ ಸಾಲ ಮರುಪಾವತಿ ಅವಧಿಯನ್ನು ಆರ್ಬಿಐ ಆರು ತಿಂಗಳು ಮುಂದೂಡಿದೆ. ಈ ಅವಧಿಯಲ್ಲಿ ಸಾಲ ಮರುಪಾವತಿ ಮಾಡಿ’ ಎಂದರು.