ಕಳವಿಭಾಗಿ (ಹಿರಿಯೂರು): ತಾಲ್ಲೂಕಿನ ಕಳವಿಭಾಗಿ ಗ್ರಾಮದ ಹಾಲುಮತ ಕುರುಬರ ಸಮುದಾಯದ ಹಿರಿಯ ಮುಖಂಡ ಹಾಗೂ ಹರ್ತಿಕೋಟೆ ಗ್ರಾಮದ ಓರುಗಲ್ಲಮ್ಮ ದೇಗುಲದ ಗುಡಿಗೌಡ ಎಂ.ಜೂಲಪ್ಪ (86) ಬುಧವಾರ ನಿಧನರಾದರು.
ಅವರ ಅಂತ್ಯಸಂಸ್ಕಾರದ ವೇಳೆ ಮಗಳು ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟು ತಂದೆಯ ಮೇಲಿನ ಪ್ರೀತಿ ತೋರಿದರು.
ಜೂಲಪ್ಪ ಅವರಿಗೆ ಪತ್ನಿ, ಒಬ್ಬ ಪುತ್ರ ಹಾಗೂ ಐವರು ಪುತ್ರಿಯರು ಇದ್ದಾರೆ. ಐವರು ಪುತ್ರಿಯರಲ್ಲಿ ಮಗಳು ಶಾಂತಮ್ಮ ತಂದೆಯ ಮೇಲಿನ ಪ್ರೀತಿಯ ದ್ಯೋತಕವಾಗಿ ಶವ ಸಾಗಿಸಲು ಹೆಗಲು ಕೊಟ್ಟರು.
ಬುಧವಾರ ಸಂಜೆ ಗ್ರಾಮದ ಜಮೀನಿನಲ್ಲಿ ಹಾಲುಮತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿತು.