<p><strong>ಮೊಳಕಾಲ್ಮುರು</strong>: ತಾಲ್ಲೂಕಿನ ಕೊಂಡ್ಲಹಳ್ಳಿಯ ಗ್ರಾಮಾಂತರ ಪ್ರೌಢಶಾಲೆ ಮೈದಾನದಲ್ಲಿ 3 ದಿನಗಳ ಕಾಲ ನಡೆದು ಭಾನುವಾರ ಮುಕ್ತಾಯಗೊಂಡ ಕೆಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಸ್ಥಳೀಯ ‘ಸ್ವಿಂಗ್ಸ್ ಕಿಂಗ್ಸ್’ ತಂಡ ಪ್ರಥಮಸ್ಥಾನ ಪಡೆದುಕೊಂಡಿತು.</p>.<p>ಸ್ಥಳೀಯ ಯೂತ್ ಕ್ರಿಕೆಟರ್ಸ್ ಹಮ್ಮಿಕೊಂಡಿದ್ದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸ್ವಿಂಗ್ಸ್ ಕಿಂಗ್ಸ್ ತಂಡವು ಶಾಡೋ ಸ್ಟ್ರೈಕರ್ಸ್ ತಂಡವನ್ನು ಪರಾಭವಗೊಳಿಸಿತು. ಟೂರ್ನಿಯ ಉತ್ತಮ ಬ್ಯಾಟ್ಸ್ ಮನ್ ಆಗಿ ದಿಲೀಪ್, ಬೌಲರ್ ಆಗಿ ಎಸ್.ಪಿ. ಪ್ರಸನ್ನಕುಮಾರ್, ಉತ್ತಮ ಪ್ರದರ್ಶಕನಾಗಿ ತೇಜುಕುಮಾರ್ ಪ್ರಶಸ್ತಿ ಪಡೆದುಕೊಂಡರು.</p>.<p>ವಿಜೇತರಿಗೆ ರಾಜ್ಯ ದ್ರಾಕ್ಷಾರಸ ಹಾಗೂ ವೈನ್ ಬೋರ್ಡ್ ಅಧ್ಯಕ್ಷ ಬಿ. ಯೋಗೇಶ್ ಬಾಬು ಬಹುಮಾನ ವಿತರಿಸಿದರು.</p>.<p>ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ಬಾಬು, ಸಹಕಾರ ಯೂನಿಯ್ ನಿರ್ದೇಶಕ ಆರ್. ರಾಮರೆಡ್ಡಿ, ಎಸ್.ಕೆ. ಗುರುಲಿಂಗಪ್ಪ, ಡಿಶ್ ಮುರುಳಿ, ಎಸ್.ಕೆ.ಬಸವರಾಜ್, ಕಾಲಾಡಿ ಮಧು, ಟಿ.ಬಿ. ಅನಂತಕುಮಾರ್, ಜಿ.ಎನ್. ಜಗದೀಶ್, ಆಯೋಜಕರಾದ ಎನ್. ನರಸಿಂಹ, ಡಿ. ತಿಪ್ಪೇಶ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೊಳಕಾಲ್ಮುರು</strong>: ತಾಲ್ಲೂಕಿನ ಕೊಂಡ್ಲಹಳ್ಳಿಯ ಗ್ರಾಮಾಂತರ ಪ್ರೌಢಶಾಲೆ ಮೈದಾನದಲ್ಲಿ 3 ದಿನಗಳ ಕಾಲ ನಡೆದು ಭಾನುವಾರ ಮುಕ್ತಾಯಗೊಂಡ ಕೆಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಸ್ಥಳೀಯ ‘ಸ್ವಿಂಗ್ಸ್ ಕಿಂಗ್ಸ್’ ತಂಡ ಪ್ರಥಮಸ್ಥಾನ ಪಡೆದುಕೊಂಡಿತು.</p>.<p>ಸ್ಥಳೀಯ ಯೂತ್ ಕ್ರಿಕೆಟರ್ಸ್ ಹಮ್ಮಿಕೊಂಡಿದ್ದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸ್ವಿಂಗ್ಸ್ ಕಿಂಗ್ಸ್ ತಂಡವು ಶಾಡೋ ಸ್ಟ್ರೈಕರ್ಸ್ ತಂಡವನ್ನು ಪರಾಭವಗೊಳಿಸಿತು. ಟೂರ್ನಿಯ ಉತ್ತಮ ಬ್ಯಾಟ್ಸ್ ಮನ್ ಆಗಿ ದಿಲೀಪ್, ಬೌಲರ್ ಆಗಿ ಎಸ್.ಪಿ. ಪ್ರಸನ್ನಕುಮಾರ್, ಉತ್ತಮ ಪ್ರದರ್ಶಕನಾಗಿ ತೇಜುಕುಮಾರ್ ಪ್ರಶಸ್ತಿ ಪಡೆದುಕೊಂಡರು.</p>.<p>ವಿಜೇತರಿಗೆ ರಾಜ್ಯ ದ್ರಾಕ್ಷಾರಸ ಹಾಗೂ ವೈನ್ ಬೋರ್ಡ್ ಅಧ್ಯಕ್ಷ ಬಿ. ಯೋಗೇಶ್ ಬಾಬು ಬಹುಮಾನ ವಿತರಿಸಿದರು.</p>.<p>ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ಬಾಬು, ಸಹಕಾರ ಯೂನಿಯ್ ನಿರ್ದೇಶಕ ಆರ್. ರಾಮರೆಡ್ಡಿ, ಎಸ್.ಕೆ. ಗುರುಲಿಂಗಪ್ಪ, ಡಿಶ್ ಮುರುಳಿ, ಎಸ್.ಕೆ.ಬಸವರಾಜ್, ಕಾಲಾಡಿ ಮಧು, ಟಿ.ಬಿ. ಅನಂತಕುಮಾರ್, ಜಿ.ಎನ್. ಜಗದೀಶ್, ಆಯೋಜಕರಾದ ಎನ್. ನರಸಿಂಹ, ಡಿ. ತಿಪ್ಪೇಶ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>