‘ಕೆಂಪುಮೂತಿ ಹುಳುಗಳಿಂದ ಹೆಚ್ಚು ಪೀಡಿತ ಮರಗಳಿದ್ದರೆ, ತಕ್ಷಣ ಅಂತಹ ಮರಗಳನ್ನು ಕತ್ತರಿಸಿ ಸುಟ್ಟುಹಾಕಬೇಕು. ಮರದ ಕಾಂಡದಲ್ಲಿ ಹುಳು ಕೊರೆದು ಕಾಂಡದ ಭಾಗ ಟೊಳ್ಳಾಗಿದ್ದರೆ, ಟೊಳ್ಳಿನ ಮೇಲ್ಭಾಗದಲ್ಲಿ ರಂಧ್ರ ಕೊರೆದು ಒಂದು ಲೀಟರ್ ನೀರಿಗೆ 5 ಎಂಎಲ್ ಬೆರೆಸಿದ ಕ್ಲೊರೊಪೈರಿಪಾಸ್ ಕೀಟನಾಶಕ ದ್ರಾವಣವನ್ನು ರಂಧ್ರದ ಮೂಲಕ ಸುರಿದು, ರಂಧ್ರವನ್ನು ಹಸಿಮಣ್ಣಿನಿಂದ ಮುಚ್ಚಿದರೆಹುಳುಗಳು ಸಾಯುತ್ತವೆ’ ಎಂದು ಸಲಹೆ ನೀಡಿದರು.