ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಗುವಳಿ ಪತ್ರಕ್ಕೆ ಕೋರಿ 8 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದೆ. ಅಧಿಕಾರಿಗಳು ಇದರಲ್ಲಿ ಕೇವಲ 760 ಅರ್ಜಿಗಳನ್ನುಮಾತ್ರ ವಿಲೇವಾರಿ ಮಾಡಿದ್ದಾರೆ ಎಂಬ ಉತ್ತರಕ್ಕೆ ಗರಂ ಆದ ಸಚಿವರು, ‘ಆತ್ಮಸಾಕ್ಷಿಯಿಂದಲಾದರೂ ಕೆಲಸ ಮಾಡಿ. ಇಷ್ಟು ಮಂದಿಯನ್ನು ಆಯ್ಕೆ ಮಾಡಿ ಉಳಿದ ಅರ್ಜಿಗಳನ್ನು ಹಾಗೆ ಇಟ್ಟಲ್ಲಿ ಅವರು ಎಲ್ಲಿಗೆ ಹೋಗಬೇಕು. ತಳಕು, ನಾಯಕನಹಟ್ಟಿ ಹೋಬಳಿಯಲ್ಲಿ ಹೆಚ್ಚು ವಿಳಂಬವಾಗಿದೆ’ ಎಂದು ಹಾಜರಿದ್ದ ಚಳ್ಳಕೆರೆ ತಹಶೀಲ್ದಾರ್ ಮಲ್ಲಿಕಾರ್ಜುನ್ ವಿರುದ್ಧ ಸಚಿವರು ಹರಿಹಾಯ್ದರು.