ಕಾರ್ಮಿಕರ ಕೊರತೆ ರೋಗಬಾಧೆ ಗುಣಮಟ್ಟವಿಲ್ಲದ ಗೂಡು ನೀರಿನ ಸಮಸ್ಯೆಯಿಂದ ಬೇಸತ್ತಿರುವ ಬೆಳೆಗಾರರು ಮಳೆಗಾಲದ ತನಕ ರೇಷ್ಮೆ ಕೃಷಿಯ ಸಹವಾಸವೇ ಬೇಡ ಎಂದು ಕೈಚೆಲ್ಲುತ್ತಿದ್ದಾರೆ. ಹಲವರು ಸೊಪ್ಪು ಕಟಾವು ಮಾಡದೇ ಹಾಗೆಯೇ ಬಿಟ್ಟಿದ್ದಾರೆ
– ಮಹೇಶ್ ವಿಸ್ತರಣಾಧಿಕಾರಿ ತಾಲ್ಲೂಕು ರೇಷ್ಮೆ ಇಲಾಖೆ
ಬಹುತೇಕ ಕೊಳವೆಬಾವಿಗಳು ಬತ್ತುತ್ತಿವೆ. ಲಕ್ಷಾಂತರ ವೆಚ್ಚದಲ್ಲಿ ಹುಳು ಸಾಕಣೆ ಮನೆಗಳನ್ನು ಕಟ್ಟಿಸಿ ರೇಷ್ಮೆ ಕೃಷಿಗೆ ಕೈ ಹಾಕಿದ್ದೇವೆ. ದರ ಕುಸಿತ ಇಳುವರಿ ಕುಂಠಿತ ಸತತ ರೋಗಬಾಧೆಯಿಂದ ಬೇಸತ್ತಿದ್ದೇವೆ. ಅಂತರ್ಜಲದ ಕೊರತೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ