ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಅವರು ಮುರುಘಾ ಮಠದ ಆಡಳಿತಾಧಿಕಾರಿ ಹಾಗೂ ವಿದ್ಯಾಪೀಠದ ಕಾರ್ಯದರ್ಶಿ ಆಗಿದ್ದರು. ಕಾರಣಾಂತರಗಳಿಂದ 2007ರಲ್ಲಿ ಮಠದಿಂದ ಹೊರಗೆ ಬಂದಿದ್ದರು. ಬಳಿಕ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡು ಜೆಡಿಎಸ್ನಿಂದ ಚುನಾವಣಾ ಅಖಾಡಕ್ಕೆ ಇಳಿದಿದ್ದರು. 2008ರಿಂದ 2013ರವರೆಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಬಹುದಿನಗಳವರೆಗೆ ಮಠದಿಂದ ದೂರವೇ ಉಳಿದಿದ್ದರು.