ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಉದ್ಯಮ ರತ್ನ’ ಮತ್ತು ‘ಆತಿಥ್ಯ ರತ್ನ’ ಎಂಬ ಎರಡು ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಉದ್ಯಮ ರತ್ನ ಪ್ರಶಸ್ತಿಗೆ, ಹುಬ್ಬಳ್ಳಿಯ ರಾಮಚಂದ್ರ ರಂಗಪ್ಪ ಕಾಮತ್, ಬೆಂಗಳೂರಿನ ಹರಿಪ್ರಸಾದ್ ಎಸ್ ಶೆಟ್ಟಿ, ಗದಗದ ಕೆ.ಸುಧಾಕರರಾವ್, ಚಿತ್ರದುರ್ಗದ ಗೋಪಾಡಿ ಅಚ್ಚುತರಾವ್, ದಾವಣಗೆರೆಯ ಅಣಬೇರು ರಾಜಣ್ಣ, ಬೆಳಗಾವಿಯ ನಾರಾಯಣ ಹರಿಶ್ಚಂದ್ರ ಪೈ, ಬೆಂಗಳೂರಿನ ಟಿ.ಎನ್. ರಾಘವೇಂದ್ರ ರಾವ್, ಬಾಗಲಕೋಟೆಯ ಸದಾನಂದ ಸುಬ್ಬಣ್ಣ ಭಟ್ ಉಡುಪಿ, ಕೊಪ್ಪಳದ ಕೆ.ವಾಸುದೇವರಾವ್ ಅವರನ್ನು ಆಯ್ಕೆ ಮಾಡಲಾಗಿದೆ. ‘ಆತಿಥ್ಯ ರತ್ನ’ ಪ್ರಶಸ್ತಿಗೆ ಬೆಂಗಳೂರಿನ ಕೆ.ಎಚ್. ರಾಘವೇಂದ್ರರಾವ್ ಮತ್ತು ನರೇಂದ್ರ ಕುಮಾರ್, ಉಡುಪಿಯ ವಿಠ್ಠಲ್ ಪೈ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದರು.