ಮಾಗಡಿ: ಪಟ್ಟಣದ ಶ್ರೀನಗರ ಬಡಾವಣೆಯಲ್ಲಿ ಪುರಸಭೆ ವತಿಯಿಂದ ಕೊರೆಸಿದ್ದ ಕೊಳೆವೆಬಾವಿಗೆ ಮುಚ್ಚಳ ಹಾಕದೆ, ಅಪಾಯಕಾರಿಯಾಗಿದೆ ಎಂದು ಜಿಲ್ಲಾ ಸವಿತಾ ಸಮಾಜದ ಉಪಾಧ್ಯಕ್ಷ ಮುನಿಕೃಷ್ಣ ತಿಳಿಸಿದರು.
ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ತೆರೆದ ಕೊಳವೆಬಾವಿಗೆ ಮಕ್ಕಳು ಬಿದ್ದು ಅಪಾಯ ಎದುರಾಗುವ ಮುನ್ನ ಪುರಸಭೆ ಅಧಿಕಾರಿಗಳು ನೀರಿಲ್ಲದೆ ಇರುವ ತೆರೆದ ಕೊಳವೆಬಾವಿಗೆ ಮುಚ್ಚಳ ಹಾಕಿ ದುರಂತ ತಪ್ಪಿಸಬೇಕು ಎಂದು ಒತ್ತಾಯಿಸಿದರು.