ತರಬೇತುದಾರ ರಂಜಿತ್ ಮಾಹಿತಿ ನೀಡಿ, ‘ಜೇನು ಸಾಕಾಣಿಕೆ ಅದ್ಭುತವಾದ ಕೃಷಿಯಾಗಿದೆ. ಜೇನುತುಪ್ಪದಲ್ಲಿ ಔಷಧ ಗುಣವಿದೆ. ಇದನ್ನು ಎಲ್ಲರೂ ಸೇವಿಸಬಹುದಾಗಿದೆ. ಜೇನು ಪೆಟ್ಟಿಗೆಗಳನ್ನು ತೋಟದಲ್ಲಿ ಇಡುವಾಗ 8ರಿಂದ 10 ಅಡಿಗಳ ಅಂತರವಿರಬೇಕು. ಜಾಗ ಸ್ವಚ್ಛತೆಯಿಂದ ಕೂಡಿದ್ದು, ನೆಲದಿಂದ ಒಂದೂವರೆ ಅಡಿ ಎತ್ತರದಲ್ಲಿರಬೇಕು. ನಾಯಿ, ಇರುವೆ, ಇನ್ನಿತರ ಕಾಡುಪ್ರಾಣಿಗಳಿಂದ ರಕ್ಷಿಸಬೇಕು. ಜೇನು ನೊಣಗಳಿಗೆ ಪ್ರಕೃತಿಯಲ್ಲಿ ಆಹಾರ ಸಿಗದೆ ಇದ್ದಾಗ ಅವು ಗೂಡು ಬಿಟ್ಟು ಬೇರೆಡೆಗೆ ವಲಸೆ ಹೋಗುತ್ತವೆ. ಅಂತಹ ಸಂದರ್ಭದಲ್ಲಿ ರೈತರು ಸಕ್ಕರೆ ಪಾಕವನ್ನು ಪೆಟ್ಟಿಗೆಯಲ್ಲಿ ಇಡಬೇಕು. ಇದರಿಂದ ಅವುಗಳಿಗೆ ಆಹಾರ ಸಿಕ್ಕಿ ಬೇರೆಡೆ ವಲಸೆ ಹೋಗುವುದಿಲ್ಲ ಎಂದರು. ಜೇನು ಕೃಷಿಯನ್ನು ಆಸಕ್ತಿಯಿಂದ ಎಲ್ಲರೂ ಮಾಡಬಹುದಾಗಿದೆ ಎಂದರು.