ಗುಡಿ ಕೈಗಾರಿಕೆಯಲ್ಲಿ ಒಂದಾಗಿರುವ ಮಣ್ಣಿನ ಸ್ಪರ್ಶದ ಘಟಕಗಳು ಈಗ ಮರೆಯಾಗುತ್ತಿದ್ದು ಪ್ಲಾಸ್ಟಿಕ್ ಮತ್ತು ಅಲ್ಯುಮಿನಿಯಂ ಪಾತ್ರೆಗಳು ಜನರ ಮನೆಗಳಲ್ಲಿ ರಾರಾಜಿಸುತ್ತಿವೆ ಎಂಬ ಬೇಸರದ ನುಡಿಗಳನ್ನು ಆಲಿಸಿದ ಚೌಟ, ಕೇಂದ್ರ ಸರ್ಕಾರ ಕುಲಕಸುಬು ಆಧಾರಿತ ವೃತ್ತಿಗಳಿಗೆ ಬೆಂಬಲ ಹಾಗೂ ಸಹಾಯಹಸ್ತ ನೀಡುತ್ತಿರುವ ಬಗ್ಗೆ ಘಟಕದ ಮಾಲೀಕರ ಗಮನ ಸೆಳೆದರು.