ಅವರನ್ನು ಮಠದ ವತಿಯಿಂದ ಚೆಂಡೆ, ಮದ್ದಳೆ, ವಾದ್ಯ ಪರಿಕರದ ನಿನಾದ, ಪೂರ್ಣ ಕುಂಭದ ಮೂಲಕ ಸ್ವಾಗತಿಸಲಾಯಿತು. ಮಠದ ಸದಸ್ಯರು ಹಾಗೂ ಭಕ್ತಾದಿಗಳು ಸೇರಿದಿದ್ದರು. ಅರ್ಚಕರು, ಹಿರಿಯರು ಸೇರಿ ಗುರುಗಳಿಗೆ ಆರತಿ ಬೆಳಗಿ, ಪ್ರವೇಶದ ವಿಧಿ ವಿಧಾನ ಪೂರೈಸಿದರು. ಭಕ್ತರು ಜಯಘೋಷಗಳನ್ನು ಕೂಗಿದರು. ತುಳಸಿ, ಹೂವಿನ ಹಾರ ಹಾಕಿ ಭಕ್ತಿ ಸಮರ್ಪಿಸಿದರು. ಬ್ರಹ್ಮಕೈ ಕೇಶವಾನಂದ ಸ್ವಾಮೀಜಿಗೆ ಗೌರವ ಸಲ್ಲಿಸಲಾಯಿತು.