‘ಬೆಳಿಗ್ಗೆ 8 ಗಂಟೆ ಸುಮಾರಿಗೆ ನೇತ್ರಾವತಿ ನದಿಯಲ್ಲಿ ತೀರದಲ್ಲಿ ಜನರಿಗಾಗಿ ಕಾಯುತ್ತಿದ್ದಾಗ ಯಾವುದೋ ಒಂದು ವಸ್ತು ತೇಲಿ ಬರುತ್ತಿದ್ದ ಹಾಗೆ ಕಂಡಿತು. ತಕ್ಷಣವೇ ದೋಣಿಯಲ್ಲಿ ಸಮೀಪಕ್ಕೆ ತೆರಳಿದಾಗ ಮಹಿಳೆ ಮುಳುಗೇಳುತ್ತಿದ್ದರು. ತಕ್ಷಣವೇ ಕೇಶವ ಎಂಬವರ ಸಹಾಯದಿಂದ ಅವರನ್ನು ಮೇಲೆತ್ತಲಾಯಿತು’ ಎಂದು ಅಬ್ಬಾಸ್ ತಿಳಿಸಿದ್ದಾರೆ.