ಬೆಳ್ತಂಗಡಿ: ತಾಲ್ಲೂಕಿನ ಬಜಿರೆ ಗ್ರಾಮದ ವಿಶ್ವನಾಥ ಪೂಜಾರಿ ಎಂಬುವರ ರಬ್ಬರ್ ತೋಟಕ್ಕೆ ಬುಧವಾರ ಬೆಂಕಿ ಬಿದ್ದು, ಸುಮಾರು ಅರ್ಧ ಎಕರೆ ರಬ್ಬರ್ ಕೃಷಿ ಸಂಪೂರ್ಣ ಹಾನಿಯಾಗಿದೆ.
ಇನ್ನೊಂದು ಪ್ರಕರಣದಲ್ಲಿ ಬೆಳ್ತಂಗಡಿಯ ಖಾಸಗಿ ಕಾಲೇಜೊಂದರ ಹಿಂಭಾಗದಲ್ಲಿ ಖಾಸಗಿಯವರ ಒಡೆತನದ ಗುಡ್ಡಕ್ಕೆ ಬೆಂಕಿ ಬಿದ್ದಿದ್ದು, ಹೆಚ್ಚಿನ ಪ್ರಮಾಣದ ಹಾನಿ ಉಂಟಾಗಿಲ್ಲ ಎಂದು ತಿಳಿದುಬಂದಿದೆ.
ಬೆಳ್ತಂಗಡಿ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರ ಸಹಕಾರದಲ್ಲಿ ಬೆಂಕಿಯನ್ನು ಹತೋಟಿಗೆ ತರಲಾಯಿತು.