ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಣ್ಣೀರುಬಾವಿ, ನಾಯರ್ ಕುದ್ರು, ಮೀನಕಾಲಿಯಾ, ಅಡ್ಯಾರ್ ಪಡೀಲ್, ಅದ್ಯಂಪಾಡಿ ಹಾಗೂ ಇತರೆ ಸ್ಥಳಗಳಲ್ಲಿ ಹೆಚ್ಚು ಅಕ್ರಮ ಮರುಳು ಗಣಿಗಾರಿಕೆ ನಡೆಯುತ್ತಿದೆ ಎಂದು ಹೇಳಿದ್ದು ಇವೆಲ್ಲದರ ಬಗ್ಗೆ ಶಾಸಕರಿಗೆ ತಿಳಿದಿದೆ. ಆದರೆ, ಅವುಗಳನ್ನು ತಡೆಯುವಲ್ಲಿ ಅವರು ವಿಫಲವಾಗಿದ್ದಾರೆ‘ ಎಂದರು.