ಮಹಾತ್ಮಗಾಂಧಿ ಅವರ ಕಲ್ಪನೆಯಲ್ಲಿ ರಾಮ ರಾಜ್ಯ ಎಂದರೆ ಉತ್ತಮ ಆಡಳಿತ ಎಂದಾಗಿತ್ತು. ಗಾಂಧೀಜಿ ಯಾವತ್ತಿಗೂ ಪರಿಶುದ್ಧತೆಯ ತತ್ವ ಅಳವಡಿಸಿಕೊಂಡಿದ್ದರು. ಹಣಕಾಸಿನ ವ್ಯವಹಾರದಲ್ಲಿ ಗಾಂಧೀಜಿ ಎಷ್ಟು ಶುಭ್ರರಾಗಿದ್ದರೆಂದರೆ, ಬ್ರಿಟಿಷರಿಗೆ ಕೊನೆ ತನಕವೂ ಅವರ ತಪ್ಪನ್ನು ಹುಡುಕಲು ಸಾಧ್ಯವಾಗಲೇ ಇಲ್ಲ. ಆದರೆ, ನಾವಿಂದು ಗಾಂಧಿ ತತ್ವವನ್ನು ಮರೆತಿದ್ದೇವೆ. ಎಲ್ಲಡೆ ಭ್ರಷ್ಟಾಚಾರ ನುಸುಳಿಕೊಂಡಿದೆ‘ ಎಂದು ವಿಷಾದಿಸಿದರು.