ಸೆಪ್ಟೆಂಬರ್ 2ರಂದು ಗಾಂಜಾ ಸೇವಿಸುತ್ತಿದ್ದ ಯುವಕನನ್ನು ಕಾವೂರು ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದರು. ಠಾಣೆಗೆ ಕರೆದೊಯ್ದ ಬಳಿಕ ಇನ್ಸ್ಪೆಕ್ಟರ್ ರಾಘವ್ ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಶ್ರೀನಿವಾಸಗೌಡ ಅವರು ಯುವಕನ ಆಪ್ತ ಸಮಾಲೋಚನೆ ನಡೆಸಿ ಬುದ್ಧಿವಾದ ಹೇಳಿದ್ದರು. ಈಗ ಸಂಪೂರ್ಣವಾಗಿ ಗಾಂಜಾ ಸೇವನೆ ತ್ಯಜಿಸಿರುವ ಆತ, ಪೊಲೀಸರಿಗೆ ಧನ್ಯವಾದ ಹೇಳಿ ಪತ್ರ ಬರೆದಿದ್ದಾನೆ. ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಅವರು ಈ ಪತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.