‘ಸಂತೋಷ್ ಅವರು ಕರ್ನಿರೆ ಕಡೆಯಿಂದ ಮೂಲ್ಕಿ ಕಡೆಗೆ ಬುಲೆಟ್ ಬೈಕಿನಲ್ಲಿ ತೆರಳುತ್ತಿದ್ದಾಗ ಕರ್ನಿರೆ ಕಡೆಗೆ ಸಾಗುತ್ತಿದ್ದ ಟೆಂಪೊ ಎದುರು ಬಂತು. ಎರಡೂ ವಾಹನಗಳು ವೇಗವಾಗಿ ಚಲಿಸುತ್ತಿದ್ದವು. ಬ್ರೇಕ್ ಹಾಕಿ ಬೈಕ್ ಅನ್ನು ನಿಯಂತ್ರಣಕ್ಕೆ ತರಲು ಯತ್ನಿಸಿದ ಸಂತೋಷ್ ಆಯತಪ್ಪಿ ರಸ್ತೆಗೆ ಬಿದ್ದರು. ಆಗ ಟೆಂಪೊದ ಹೆಡ್ಲೈಟ್ ಅವರ ತಲೆಗೆ ಬಡಿದಿತ್ತು. ಗಾಯಾಳುವನ್ನು ಮುಕ್ಕಾದ ಶ್ರೀನಿವಾಸ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಅಸುನೀಗಿದ್ದರು ಎಂಬುದಾಗಿ ಸ್ಥಳೀಯ ನಿವಾಸಿ ರಂಜನ್ ದೂರು ನೀಡಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.