ಆಮ್ನೆಸ್ಟಿ ಇಂಟರ್ನ್ಯಾಷನಲ್, ರೋಹಿಂಗ್ಯಾ ಉಗ್ರರ ದಾಳಿಯಿಂದ ತಪ್ಪಿಸಿಕೊಂಡು ಬದುಕುಳಿದವರ ಪೈಕಿ 8 ಜನರ ಸಂದರ್ಶನ ನಡೆಸಿದೆ. ‘ಹಲವಾರು ಜನ ಮುಸುಕುಧಾರಿಗಳು ಹಾಗೂ ಗ್ರಾಮದ ರೋಹಿಂಗ್ಯಾಗಳು ನಮ್ಮವರನ್ನು ಸುತ್ತುವರಿದರು. ನಮ್ಮವರ ಕಣ್ಣಿಗೆ ಬಟ್ಟೆ ಕಟ್ಟಿ, ಗ್ರಾಮದಿಂದ ಹೊರಗೆ ಕರೆದುಕೊಂಡು ಹೋದರು. ನಮ್ಮವರತ್ತ ನೋಡದಂತೆ ತಾಕೀತು ಮಾಡಿದರು. ಚಾಕು, ಕಬ್ಬಿಣದ ಸರಳು, ಗುದ್ದಲಿಯಿಂದ ನಮ್ಮವರನ್ನು ಹತ್ಯೆ ಮಾಡಿದರು’ ಎಂದು 18 ವರ್ಷದ ರಾಜಕುಮಾರ ತಿಳಿಸಿದ್ದಾಗಿ ಸಂಸ್ಥೆ ವರದಿ ಮಾಡಿದೆ.