ಎರಡು ಪ್ರಕರಣಗಳಲ್ಲಿ ಬೇಕಾಗಿದ್ದ ಉಮ್ಮರ್ ಫಾರೂಕ್ನನ್ನು ಬಂಧಿಸಲು ಮಂಗಳವಾರ ತಡರಾತ್ರಿ ಪೊಲೀಸ್ ತಂಡ ನಗರದ ಹೊರ ವಲಯದ ಪಚ್ಚನಾಡಿಗೆ ತೆರಳಿತ್ತು. ಈ ಸಂದರ್ಭ ಆರೋಪಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಶರಣಾಗುವಂತೆ ಪೊಲೀಸರು ಮನವಿ ಮಾಡಿದರೂ ಆತ ಪ್ರತಿರೋಧ ಒಡ್ಡಿದ್ದಾನೆ. ಅಂತಿಮವಾಗಿ ಆತನ ಕಾಲಿಗೆ ಗುಂಡು ಹೊಡೆದು ಆತನನ್ನು ಬಂಧಿಸಿದ್ದಾರೆ.