ಕಾಸರಗೋಡು: ಮಂಜೇಶ್ವರ ಬಳಿಯ ಕುಂಜತ್ತೂರು ತೂಮಿನಾಡಿನಲ್ಲಿ ಮಹಿಳೆಯ ಜನ್ಮದಿನದಂತೆ ಶಾಲು ಗ್ರೈಂಡರ್ಗೆ ಸಿಲುಕಿ ಕೊರಳು ಬಿಗಿಯಲ್ಪಟ್ಟು ಮೃತಪಟ್ಟಿದ್ದಾರೆ.
ಲಕ್ಷಂವೀಡು ಕಾಲೊನಿ ನಿವಾಸಿ ರಂಜನ್ ಕುಟ್ಟ ಎಂಬುವರ ಪತ್ನಿ ಜಯಶೀಲಾ (21) ಮೃತರು. ತೂಮಿನಾಡಿನ ಬೇಕರಿಯೊಂದರಲ್ಲಿ ಈ ಘಟನೆ ನಡೆದಿದೆ.
ಬೃಹತ್ ಗ್ರೈಂಡರ್ನಲ್ಲಿ ತೆಂಗಿನಕಾಯಿ ಅರೆಯುತ್ತಿದ್ದ ವೇಳೆ ಕೆಳಬದಿಯ ತಿರುಗುವ ಕಬ್ಬಿಣದ ಹಿಡಿಗೆಯಲ್ಲಿ ಅವರು ಧರಿಸಿದ್ದ ಉಡುಪಿನ ಶಾಲು ಸಿಲುಕಿಕೊಂಡಿತ್ತು. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ.
ಜಯಶೀಲಾ ಅವರು ವಿಟ್ಲ ನಿವಾಸಿ ಮಹಾಲಿಂಗ- ಸುನಂದಾ ದಂಪತಿ ಪುತ್ರಿ. ಒಂದೂವರೆ ವರ್ಷ ಹಿಂದೆ ಅವರ ವಿವಾಹ ನಡೆದಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.