ಮಂಗಳೂರು: ‘ಪ್ರಸ್ತುತ ಕಾಲಘಟ್ಟದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಪ್ರತಿಪಾದಿಸಿದ ತತ್ವ, ಆದರ್ಶಗಳನ್ನು ಮನೆ-ಮನೆಗಳಿಗೆ ತಲುಪಿಸುವ ಅಗತ್ಯ ಇದೆ. ಗುರುಗಳ ಜೀವನ ಸಂದೇಶವನ್ನು ‘ಶೂದ್ರ ಶಿವ’ ರಂಗಪ್ರಯೋಗದ ಮೂಲಕ ಪ್ರಸಾರ ಮಾಡುವ ಪ್ರಯತ್ನ ಸಾರ್ಥಕವಾಗಲಿ’ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಹಾರೈಸಿದರು.